ADVERTISEMENT

ಬೆಳಗಟ್ಟಿ: ನೀರಿನ ಘಟಕ ದುರಸ್ತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 7:01 IST
Last Updated 12 ಜುಲೈ 2021, 7:01 IST
ಅಳವಂಡಿ ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಸ್ಥಗಿತಗೊಂಡಿರುವ ನೀರಿನ ಘಟಕ
ಅಳವಂಡಿ ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಸ್ಥಗಿತಗೊಂಡಿರುವ ನೀರಿನ ಘಟಕ   

ಬೆಳಗಟ್ಟಿ (ಅಳವಂಡಿ): ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿದೆ. ಜನ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಮರ್ಪಕ ನಿರ್ವಹಣೆ ಇಲ್ಲದೆ ಕಳೆದ ಹಲವು ತಿಂಗಳಿನಿಂದ ಘಟಕ ಸ್ಥಗಿತಗೊಂಡಿದೆ. ಜನ ನೀರಿಗಾಗಿ ಕೊಳವೆಬಾವಿಯನ್ನು ಅವಲಂಬಿಸಿದ್ದಾರೆ. ಆ ನೀರು ಸರಿಯಾಗಿಲ್ಲ. ರೋಗ ಭೀತಿ ಎದುರಾಗಿದೆ.

‘ನೀರು ಪೂರೈಸುವ ಮೂಲಕ ಜನರ ದಾಹ ನೀಗಿಸಬೇಕಾದ ನೀರಿನ ಘಟಕಗಳು ಅಧಿಕಾರಗಳ, ಜನಪ್ರತಿನಿಧಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷಕ್ಕೆ ಬಲಿಯಾಗಿದೆ’ ಎಂದು ಗ್ರಾಮಸ್ಥರು ದೂರಿದರು.

ADVERTISEMENT

ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರರು ಇತ್ತ ಕಡೆ ಗಮನಹರಿಸಿ ಕೂಡಲೇ ನೀರಿನ ಘಟಕ ದುರಸ್ತಿ ಮಾಡಬೇಕು ಎಂದು ಗ್ರಾಮಸ್ಥರಾದ ಶಂಕರಗೌಡ ಪಾಟೀಲ, ಕಾಸಿಂ ಸಾಬ, ದೇವೆಂದ್ರಪ್ಪ , ಶಿವನಗೌಡ ಪಾಟೀಲ, ಇಮಾಮಸಾಬ, ಶಫೀಸಾಬ ದರ್ಗಾದ ಹಾಗೂ ಮುಸ್ತಾಫ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.