ಮಳವಳ್ಳಿ: ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಸೈಕಲ್, ಬೈಕ್, ಕಾರುಗಳಲ್ಲಿ ಬಂದರೆ ತಾಲ್ಲೂಕಿನ ಬೆಳಕವಾಡಿಯಲ್ಲಿ ಹತ್ತನೆ ತರಗತಿ ವಿದ್ಯಾರ್ಥಿ ಯಾಸಿನ್ ಪಾಷ್ ಕುದುರೆ ಸವಾರಿ ಮಾಡಿಕೊಂಡು ಬಂದಿದ್ದು ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಗಮನ ಸೆಳೆಯಿತು.
ಇಲ್ಲಿಂದ ಆರು ಕಿ.ಮೀ ದೂರದಲ್ಲಿರುವ ಹ್ಯಾಂಡ್ಪೋಸ್ಟ್ ನಿವಾಸಿ ಉಬೇದುಲ್ಲಾ ಅವರ ಪುತ್ರ ಯಾಸಿನ್ ಪಾಷ್ ಪ್ರತಿದಿನ ಬಸ್ನಲ್ಲಿ ಬರುತ್ತಿದ್ದ, ಆದರೆ ಶುಕ್ರವಾರ ಶಾಲೆಗೆ ಕುದುರೆ ಮೂಲಕ ಬಂದಿದ್ದು ಗ್ರಾಮಸ್ಥರ ಹಾಗೂ ವಿದ್ಯಾರ್ಥಿಗಳ ಗಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.