ADVERTISEMENT

‘ಪ್ರಜಾವಾಣಿ’ ವತಿಯಿಂದ ಮಳವಳ್ಳಿಯಲ್ಲಿ ರೈತ ಸಮಾವೇಶ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 7:29 IST
Last Updated 28 ನವೆಂಬರ್ 2017, 7:29 IST
ಸಮಾವೇಶದಲ್ಲಿ ಸಮಗ್ರ ಕೃಷಿ ಪ್ರಾತ್ಯಕ್ಷಿಕೆ
ಸಮಾವೇಶದಲ್ಲಿ ಸಮಗ್ರ ಕೃಷಿ ಪ್ರಾತ್ಯಕ್ಷಿಕೆ   

ಮಂಡ್ಯ: ‘ಪ್ರಜಾವಾಣಿ’ ವತಿಯಿಂದ ಮಳವಳ್ಳಿ ಪಟ್ಟಣದ ರೈತ ಸಮುದಾಯ ಭವನದಲ್ಲಿ ಮಂಗಳವಾರ ರೈತ ಸಮಾವೇಶ ಆಯೋಜಿಸಲಾಗಿದ್ದು, ರೈತರು ಭಾಗವಹಿಸಿ ಮಾಹಿತಿ ಪಡೆಯುತ್ತಿದ್ದಾರೆ.

ಅಧಿಕಾರಿಗಳು ರೈತರಿಗೆ ಕೃಷಿ ತಾಕುಗಳೊಂದಿಗೆ ಮಾಹಿತಿ ನೀಡುತ್ತಿದ್ದಾರೆ.

ಸಿರಿಧಾನ್ಯ ರಾಶಿ ಪೂಜೆ ಮೂಲಕ ರೈತ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ‘ಪ್ರಜಾವಾಣಿ‘ಯ ಸಿಇಒ ಕಾರ್ತಿಕ್ ಬಾಲಕೃಷ್ಣನ್ ಅವರು ಸಿರಿಧಾನ್ಯ ರಾಶಿಗೆ ಪೂಜೆ ನೆರವೇರಿಸಿದರು.

ADVERTISEMENT

ನೂರಾರು ರೈತರು ಸಮಾವೇಶದಲ್ಲಿ ಭಾಗವಹಿಸಲು ನೋಂದಣಿ ಮಾಡಿಸಿಕೊಂಡಿದ್ದು ಸಮಗ್ರ ಕೃಷಿಯ ಬಗ್ಗೆ ಮಾರ್ಗದರ್ಶನ ಪಡೆಯುತ್ತಿದ್ದಾರೆ. ರೈತ ಸಮುದಾಯ ಭವನದ ಎದುರು ಹನಿ ನೀರಾವರಿ ಬಗ್ಗೆ ಮಾಹಿತಿ ನೀಡುವ ಮಾದರಿಯೊಂದನ್ನು ಮಣ್ಣಿನಿಂದ ವಿನ್ಯಾಸ ಮಾಡಲಾಗಿದೆ.

ಸಿರಿಧಾನ್ಯ ರಾಶಿ ಪೂಜೆ ಮೂಲಕ ರೈತ ಸಮಾವೇಶಕ್ಕೆ ಚಾಲನೆ ನೀಡಲಾಯಿತು.

‘ಪ್ರಜಾವಾಣಿ‘ಯ ಸಿಇಒ ಕಾರ್ತಿಕ್ ಬಾಲಕೃಷ್ಣನ್ ಅವರು ಸಿರಿಧಾನ್ಯ ರಾಶಿಗೆ ಪೂಜೆ ನೆರವೇರಿಸಿದರು.

ರೈತರಿಗೆ ಯಂತ್ರೋಪಕರಣಗಳ ಮಾಹಿತಿ.

ಹನಿ ನೀರಾವರಿ ಪ್ರಾತ್ಯಕ್ಷಿಕೆ ತಾಕು.

ಮಾಹಿತಿ ಪಡೆದ ರೈತರು.

ಕಲಾವಿದರಿಂದ ಗಾಯನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.