ADVERTISEMENT

ಸಂಭ್ರಮದ ಪಂಚಲಿಂಗೇಶ್ವರ ತೆಪ್ಪೋತ್ಸವ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 6:59 IST
Last Updated 5 ಡಿಸೆಂಬರ್ 2013, 6:59 IST

ಮಂಡ್ಯ: ತಾಲ್ಲೂಕಿನ ಕೆರಗೋಡು ಗ್ರಾಮದ ಪಂಚಲಿಂಗೇಶ್ವರ ಸ್ವಾಮಿಯ ದೀಪ ಹಾಗೂ ತೆಪ್ಪೋತ್ಸವ ಇತ್ತೀಚೆಗೆ ವಿಜೃಂಭಣೆಯಿಂದ ನಡೆಯಿತು.

ದೇವಾಲಯಕ್ಕೆ ಹೂವಿನ ವಿಶೇಷ ಅಲಂಕಾರದ ಜತೆಗೆ ದೇವಸ್ಥಾನದ ಮುಂಭಾಗದ ತಾವರಕೆರೆಯಲ್ಲಿ ನಡೆದ ದೀಪ ಹಾಗೂ ಬಸವನ ತೆಪ್ಪೋತ್ಸವವನ್ನು ಭಕ್ತರು ಕಣ್ತುಂಬಿಕೊಂಡರು.

1.8 ಲಕ್ಷ ದೀಪಗಳನ್ನು 800 ಲೀಟರ್‌ ಎಣ್ಣೆಯಲ್ಲಿ ಬೆಳಗಲಾಯಿತು. ಇದರಿಂದಾಗಿ ದೇವಸ್ಥಾನದ ಸುತ್ತ ಮುತ್ತಲೂ ಎಲ್ಲೆಲ್ಲೂ ಬೆಳಕು ಹರಡಿಕೊಂಡಿತ್ತು.

ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ 4 ಕೌಂಟರ್‌ಗಳ ಮೂಲಕ ಪ್ರಸಾದ ವಿತರಣೆಯನ್ನು ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.