ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್ಎಸ್ನ ಪೆಂಚಲಾಭೋವಿ ಕಾಲೊನಿಯಲ್ಲಿ ಗುಡಿಸಲುಗಳನ್ನು ನಾಶಪಡಿಸಿ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ತಾಲ್ಲೂಕಿನ ಬೆಳಗೊಳ ಗ್ರಾಮದ ಮಂಜುನಾಥ್, ಶಶಿ ಮತ್ತು ಮಜ್ಜಿಗೆಪುರ ಗ್ರಾಮದ ಶಿವೇಗೌಡ ಎಂಬುವರನ್ನು ಬಂಧಿಸಲಾಗಿದೆ. ಬಂಧಿತರನ್ನು ಗುರುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೆಆರ್ಎಸ್ ಸರ್ವೆ ನಂ. 86ರಲ್ಲಿರುವ ಏಳೆಂಟು ಮನೆಗಳನ್ನು ಆರೋಪಿಗಳು ಕೆಡವಿದ್ದರು. ಸದರಿ ಜಾಗ ತಮ್ಮದೆಂದು ಹೇಳಿ ಗುಡಿಸಲುಗಳನ್ನು ಜೆಸಿಬಿ ಯಂತ್ರ ಬಳಸಿ ಏಕಾಏಕಿ ಉರುಳಿಸಿದ್ದರು. ಗುಡಿಸಲು ಕೆಡವಿದ ಸಂಬಂಧ ಭೋವಿ ಜನಾಂಗದವರು ಜಿಲ್ಲಾಧಿಕಾರಿ ಮತ್ತು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ಸಂಬಂಧ ಪಾಂಡವಪುರ ಉಪ ವಿಭಾಗಾಧಿಕಾರಿ ಶೈಲಜಾ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.