ADVERTISEMENT

ತಿ.ನರಸೀಪುರ: ಬೈಕ್ ಕಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 10:43 IST
Last Updated 16 ಆಗಸ್ಟ್ 2019, 10:43 IST
ತಿ.ನರಸೀಪುರ ಪಟ್ಟಣದ ಪೊಲೀಸರು ಮೂವರು ಕಳ್ಳರನ್ನು ಬಂಧಿಸಿ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ
ತಿ.ನರಸೀಪುರ ಪಟ್ಟಣದ ಪೊಲೀಸರು ಮೂವರು ಕಳ್ಳರನ್ನು ಬಂಧಿಸಿ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ   

ತಿ.ನರಸೀಪುರ: ವಿವಿಧೆಡೆ ಬೈಕ್‌ ಕಳವು ಮಾಡಿದ್ದ ಮೂವರು ಕಳ್ಳರನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿಯ ನಿಂಗ ಅಲಿಯಾಸ್ ನಿಂಗರಾಜು, ಶಿವು ಅಲಿಯಾಸ್ ಶಿವಕುಮಾರ್, ಬನ್ನೂರು ಹೋಬಳಿಯ ಅರವಟ್ಟಿಗೆ ಕೊಪ್ಪಲು ಗ್ರಾಮದ ಎಸ್.ರಾಮು ಬಂಧಿತ ಆರೋಪಿಗಳು.

ಬಂಧಿತರಿಂದ ಬೆಂಗಳೂರು ನಗರ, ಕೆ.ಎಂ.ದೊಡ್ಡಿ, ಕೊಳ್ಳೇಗಾಲ ತಾಲ್ಲೂಕಿನ ಪಾಳ್ಯ, ತಿ.ನರಸೀಪುರ ಠಾಣಾ ವ್ಯಾಪ್ತಿಯ ಮುತ್ತತ್ತಿ ಗ್ರಾಮಗಳಲ್ಲಿ ಕಳವು ಮಾಡಿದ್ದ ₹ 3.5 ಲಕ್ಷ ಮೌಲ್ಯದ 9 ಬೈಕ್‌ ವಶಪಡಿಸಿಕೊಳ್ಳಲಾಗಿದೆ ಎಂದು ತಿ.ನರಸೀಪುರ ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.