ADVERTISEMENT

‘ಬ್ಯಾಡ್ ಮಾನರ್ಸ್’ ವೀಕ್ಷಣೆ: ಮಂಡ್ಯದಲ್ಲಿ ನಟ ಅಭಿಷೇಕ್‌ಗೆ ಅದ್ದೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2023, 13:15 IST
Last Updated 26 ನವೆಂಬರ್ 2023, 13:15 IST
ಮಂಡ್ಯ ನಗರದ ಸಂಜಯ ಥಿಯೇಟರ್‌ಗೆ ತಮ್ಮ ‘ಬ್ಯಾಡ್‌ಮ್ಯಾನರ್ಸ್‌’ ಸಿನಿಮಾ ವೀಕ್ಷಣೆಗೆ ಬಂದ ನಟ ಅಭಿಷೇಕ್‌ ಅಂಬರೀಷ್‌ ಮೇಲೆ ಹೂವುಗಳನ್ನು ಚೆಲ್ಲಿ ಅಭಿಮಾನಿಗಳು ಸ್ವಾಗತಿಸಿದರು.
ಮಂಡ್ಯ ನಗರದ ಸಂಜಯ ಥಿಯೇಟರ್‌ಗೆ ತಮ್ಮ ‘ಬ್ಯಾಡ್‌ಮ್ಯಾನರ್ಸ್‌’ ಸಿನಿಮಾ ವೀಕ್ಷಣೆಗೆ ಬಂದ ನಟ ಅಭಿಷೇಕ್‌ ಅಂಬರೀಷ್‌ ಮೇಲೆ ಹೂವುಗಳನ್ನು ಚೆಲ್ಲಿ ಅಭಿಮಾನಿಗಳು ಸ್ವಾಗತಿಸಿದರು.   

ಮಂಡ್ಯ: ‘ಬ್ಯಾಡ್ ಮಾನರ್ಸ್’ ಚಿತ್ರ ವೀಕ್ಷಣೆಗೆ ಆಗಮಿಸಿದ ನಟ ಅಭಿಷೇಕ್ ಅಂಬರೀಷ್ ಅವರಿಗೆ ಭಾನುವಾರ ನಗರದಲ್ಲಿ ಅಭಿಮಾನಿಗಳು ಪುಷ್ಪಾರ್ಚನೆ ಮಾಡಿ, ಪಟಾಕಿ ಸಿಡಿಸಿ ಅದ್ದೂರಿ ಸ್ವಾಗತ ನೀಡಿದರು.

‘ಬ್ಯಾಡ್ ಮ್ಯಾನರ್ಸ’ ಚಲನಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ನಗರದ ಸಂಜಯ ಚಿತ್ರಮಂದಿರಕ್ಕೆ ಭೇಟಿ ನೀಡಿದ ಅಭಿಷೇಕ್ ಅಂಬರೀಷ್ ಅವರನ್ನು ಅಖಿಲ ಕರ್ನಾಟಕ ಅಂಬರೀಷ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್ ನೇತೃತ್ವದಲ್ಲಿ ಸ್ವಾಗತಿಸಲಾಯಿತು.

ಅಭಿಷೇಕ್‌ ಮಾತನಾಡಿ, ತಂದೆಯವರ ಅಭಿಮಾನಿಗಳು ನನ್ನನ್ನು ಬೆಳೆಸಿ, ಜೊತೆ ನೀವೆಲ್ಲಾ ಇದ್ದೀರಿ ಎನ್ನುವುದೇ ಒಂದು ಧೈರ್ಯ ಎಂದು  ಅಂಬರೀಷ್ ಅವರನ್ನು ನೆನೆದು ಭಾವುಕರಾದರು. ಮಂಡ್ಯ ಜನರುಚಿತ್ರ ವೀಕ್ಷಣೆ ಮಾಡಿ ಆಶೀರ್ವದಿಸ ಬೇಕು’ ಎಂದು ಮನವಿ ಮಾಡಿದರು.

ADVERTISEMENT

ಹೂವಿನ ಮಳೆ

ಅಭಿಷೇಕ್ ಅಂಬರೀಷ್ ಬರುತ್ತಿದ್ದಂತೆ ಸ್ಥಳದಲ್ಲಿದ್ದ ಅಭಿಮಾನಿಗಳು ಜೆಸಿಬಿಯಲ್ಲಿ ಹೂವಿನ ಮಳೆಗರೆದರು.  ಥಿಯೇಟರ್‌ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಮಹಿಳೆಯರು ಬೆಲ್ಲದ ಆರತಿ ಬೆಳಗಿ ‘ದೃಷ್ಟಿ ತೆಗೆ’ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.