ಮಂಡ್ಯ: ಪಾಂಡವಪುರ ತಾಲ್ಲೂಕಿನ ಕನಗನಮರಡಿ ಗ್ರಾಮದ ಬಳಿ ಬಸ್ ದುರಂತ ನಡೆದ ಸ್ಥಳದಲ್ಲೇ ಕಾರು ಮುಗುಚಿ ಬಿದ್ದಿದೆ. ಆದರೆ ಕಾರಿನಲ್ಲಿದ್ದವರಿಗೆ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಮಂಡ್ಯ ತಾಲ್ಲೂಕಿನ ಬೂಕನಕೆರೆ ಪಶು ಆಸ್ಪತ್ರೆ ವೈದ್ಯ ಶಿವಯ್ಯ ಅವರು ಕನಗನಮರಡಿ ಗ್ರಾಮಕ್ಕೆ ಆಗಮಿಸಿದ್ದು, ಬಸ್ ದುರಂತ ನಡೆದ ಸ್ಥಳ ವೀಕ್ಷಣೆಗೆ ತೆರಳಿದ್ದಾರೆ. ಸ್ಥಳ ವೀಕ್ಷಣೆಗೆ ಕಾರು ನಿಲ್ಲಿಸುವ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮುಗುಚಿ ಬಿದ್ದಿದೆ. ಕಾರು ಚಾಲಕ, ವೈದ್ಯ ಸೇರಿ ಮೂವರು ಪಾರಾಗಿದ್ದಾರೆ.
5 ದಿನಗಳ ಹಿಂದೆ ಕನಗನಮರಡಿ ಬಳಿ ನಾಲೆಗೆ ಉರುಳಿದ ಬಸ್ ದುರಂತದಲ್ಲಿ 30 ಜನ ಜಲಸಮಾಧಿಯಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.