ಮಳವಳ್ಳಿ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಚನ್ನೇಗೌಡನದೊಡ್ಡಿ ಗ್ರಾಮದಲ್ಲಿ ಮಂಗಳವಾರ ಪಶು ಆಹಾರ ಎಂದು ಭಾವಿಸಿ ಯೂರಿಯಾ ತಿಂದು ಮೂರು ಹಸುಗಳು ಸಾವನ್ನಪ್ಪಿವೆ.
ರೈತ ಸಿದ್ದಲಿಂಗೇಗೌಡ ಅವರ ಎರಡು ಹಸುಗಳು, ಮಹದೇವ ಅವರಿಗೆ ಸೇರಿದ ಒಂದು ಹಸು ಮೃತಪಟ್ಟಿದೆ. ಹಸುಗಳನ್ನು ಹೊರಗಡೆ ಕಟ್ಟಲು ಬಿಟ್ಟಾಗ ಈ ಅವಘಡ ಸಂಭವಿಸಿದೆ.
ವಡ್ಡರಹಳ್ಳಿ ಪಶು ವೈದ್ಯಾಧಿಕಾರಿ ವೈದ್ಯಕೀಯ ಪರೀಕ್ಷೆ ನಡೆಸಿದರು. ‘ಹಸುಗಳಿಂದಲೇ ಕುಟುಂಬದ ನಿರ್ವಹಣೆ ಆಗುತ್ತಿತ್ತು. ದಿಕ್ಕೇ ತೋಚದಂತಾಗಿದೆ’ ಎಂದು ಸಿದ್ದಲಿಂಗೇಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.