ADVERTISEMENT

ನನ್ನ ಬಳಿಯೇ ಲಂಚ ಕೇಳಿದ್ದಾರೆ: ಶಾಸಕ ಮಧು ಮಾದೇಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 5:17 IST
Last Updated 25 ಜನವರಿ 2023, 5:17 IST
ಮಧು ಜಿ ಮಾದೇಗೌಡ
ಮಧು ಜಿ ಮಾದೇಗೌಡ   

ಮದ್ದೂರು: ‘ರಾಜ್ಯ ಸರ್ಕಾರದಲ್ಲಿ ಶಾಸಕರದ್ದಾಗಲೀ ವಿಧಾನ ಪರಿಷತ್‌ ಸದಸ್ಯರದ್ದಾಗಲೀ ಲಂಚ ಕೊಟ್ಟರೆ ಮಾತ್ರ ಕೆಲಸಗಳು ಆಗುತ್ತವೆ. ನನ್ನ ಬಳಿಯೇ ಲಂಚ ಕೇಳಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಮಧು ಜಿ.ಮಾದೇಗೌಡ ಆರೋಪಿಸಿದರು.

ಪಟ್ಟಣದ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಎಸ್.ಎಂ.ಶಂಕರ್ ಟ್ರಸ್ಟ್‌ನಿಂದ ತಾಲ್ಲೂಕಿನ ಸವಿತಾ ಸಮಾಜದವರಿಗೆ ಸಲಕರಣೆಗಳ ಕಿಟ್ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಣ ನೀಡಿದರೆ ಮಾತ್ರ ಈ ಸರ್ಕಾರದಲ್ಲಿ, ಸರ್ಕಾರದ ಯಾವುದೇ ಕಚೇರಿಗಳಲ್ಲಿ ಕೆಲಸಗಳು ಆಗುತ್ತವೆ. ನನ್ನ ಬಳಿಯೂ ಲಂಚ ಕೇಳಿದ್ದಾರೆ. ವಿಧಾನಪರಿಷತ್ ಸದಸ್ಯರಲ್ಲೇ ಲಂಚ ಕೇಳಿದರೆ ಸಾಮಾನ್ಯ ಜನರ ಗತಿ ಏನು ಎಂದು ನಿಮಗೆ ಅಚ್ಚರಿಯಾಗಬಹುದು. ಇದರಿಂದಾಗಿಯೇ ರಾಜ್ಯ ಸರ್ಕಾರವನ್ನು 40 ಪರ್ಸೆಂಟ್‌ ಸರ್ಕಾರ ಎಂದು ಹೇಳುವುದು’ ಎಂದು ಅವರು ದೂರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.