ADVERTISEMENT

ಕನ್ನಡ ಓದಲು ತಡವರಿಸಿದ ನಾರಾಯಣ ಗೌಡ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:56 IST
Last Updated 1 ಡಿಸೆಂಬರ್ 2019, 13:56 IST
   

ಕೆ.ಆರ್‌ ಪೇಟೆ (ಮಂಡ್ಯ): ನಾಮಪತ್ರ ಸಲ್ಲಿಸಿದ ನಂತರ ಚುನಾವಣಾಧಿಕಾರಿ ಎದುರು ಪ್ರಮಾಣ ಪತ್ರ ಹಾಗೂ ದೃಢೀಕರಣ ಪತ್ರವನ್ನು ಓದುವಾಗ, ಕೆ.ಸಿ.ನಾರಾಯಣಗೌಡ ತಡವರಿಸಿದರು.

ಸಚಿವ ಮಾಧುಸ್ವಾಮಿ, ಪತ್ನಿಯೊಂದಿಗೆ ನಾಮಪತ್ರ ಸಲ್ಲಿಸಲು ತಾಲೂಕು ಕಚೇರಿಗೆ ಬಂದಿದ್ದ ನಾರಾಯಣಗೌಡ, ಚುನಾವಣಾಧಿಕಾರಿಯ ಎದುರು ಪ್ರಮಾಣ ಪತ್ರ ಓದಲಾರಂಭಿಸಿದರು. ಈ ವೇಳೆ ಅವರು ತಡವರಿಸಲಾರಂಭಿಸಿದರು.

ಈ ಸಂದರ್ಭದಲ್ಲಿ ಅವರ ಪತ್ನಿ ದೇವಕಿ ಓದಲು ಸಹಾಯ ಮಾಡಿದರು. ನಾರಾಯಣಗೌಡ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾಗ, ಪ್ರಮಾಣವಚನ ಸ್ವೀಕರಿಸುವಾಗಲೂ ಕನ್ನಡ ಓದಲು ತಡವರಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.