ADVERTISEMENT

‘ವಿಜಯೋತ್ಸವವೇ ಸೇನೆ ಸೇರಲು ಉತ್ಸಾಹ’

ಕಾರ್ಗಿಲ್‌ ಹುತಾತ್ಮರಿಗೆ ಮಂಡ್ಯ ನಗರದ ಗಾಂಧಿ ಭವನದಲ್ಲಿ ದೀಪ ನಮನ

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 4:54 IST
Last Updated 28 ಜುಲೈ 2022, 4:54 IST
ಮಂಡ್ಯ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಮೈಸೂರು ವಿ.ವಿ.ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜುಗೌಡ ಉದ್ಘಾಟಿಸಿದರು. ಅನಿಲ್‌ ಕುಮಾರ್‌ ಇದ್ದರು
ಮಂಡ್ಯ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಮೈಸೂರು ವಿ.ವಿ.ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜುಗೌಡ ಉದ್ಘಾಟಿಸಿದರು. ಅನಿಲ್‌ ಕುಮಾರ್‌ ಇದ್ದರು   

ಮಂಡ್ಯ: ಕಾರ್ಗಿಲ್‌ ವಿಜಯ ದಿವಸವನ್ನು ಹುತಾತ್ಮರಾದ ನಮ್ಮ ಹೆಮ್ಮೆಯ ಸೈನಿಕರಿಗೆ ಸಮರ್ಪಿಸಬೇಕು. ಆ ಮೂಲಕ ಯುವಕರಲ್ಲಿ ಸೇನೆ ಸೇರುವ ಉತ್ಸಾಹ ಹೆಚ್ಚಿಸಬೇಕು ಎಂದುಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜುಗೌಡ ಸಲಹೆ ನೀಡಿದರು.

ನಗರದ ಗಾಂಧಿ ಭವನದಲ್ಲಿ ಕಲಾತಪಸ್ವಿ ಟ್ರಸ್ಟ್, ಡಾ.ಈ.ಸಿ.ನಿಂಗರಾಜುಗೌಡ ಫೌಂಡೇಷನ್, ಚಿದಂಬರ ನಟೇಶ ನಾಟ್ಯ ಶಾಲೆ ಬುಧವಾರ ಆಯೋಜಿಸಿದ್ದಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ದೀಪ ನಮನ ಹಾಗೂ ಪ್ರಜಾ ಭಾರತ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ಸೇನೆಯು ಪಾಕಿಸ್ತಾನ ಸೈನಿಕರ ಹುಟ್ಟಡಗಿಸಿದ ಕ್ಷಣವೇ ಕಾರ್ಗಿಲ್ ವಿಜಯ ದಿವಸ ಆಗಿದೆ. ಭಾರತ ಮತ್ತು ಪಾಕಿಸ್ತಾನದಯುದ್ಧದ ನಂತರ, ಗಡಿಯಲ್ಲಿನ ಉದ್ವಿಗ್ನತೆ ತೀವ್ರಗೊಂಡಿದ್ದು, ಕೇಂದ್ರ ಸರ್ಕಾರವು ಆಪರೇಷನ್ ವಿಜಯ್ ಪ್ರಾರಂಭಿಸಿ ಜಯದ ಸರಮಾಲೆ ತೊಡಲು ಸಾಧ್ಯವಾಯಿತು. ದೇಶದ ಯುವಕರು ಸೇನೆ ಸೇರುವ ಉತ್ಸಾಹ ಬೆಳೆಸಿಕೊಂಡು, ಈ ವಿಜಯೋತ್ಸವವನ್ನೇ ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದರು.

ADVERTISEMENT

ಕಲಾತಪಸ್ಸಿ ಟ್ರಸ್ಟ್‌ನಲ್ಲಿ ಚಿತ್ರಕಲಾ ತರಬೇತಿ ಪಡೆಯುವ ವಿದ್ಯಾರ್ಥಿಗಳು ಮತ್ತು ರಾಜ್ಯಮಟ್ಟದ ಚಿತ್ರಕಲೆ ಹಾಗೂ ವೇಷಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಸ್ಪರ್ಧಾರ್ಥಿಗಳು, ಪೋಷಕರು ದೀಪಗಳನ್ನು ಉರಿಸಿ ಯೋಧರಿಗೆ ನಮನ ಸಲ್ಲಿಸಿದರು. ವಿಜೇ ತರಿಗೆ ಬಹುಮಾನ ನೀಡಲಾಯಿತು.

ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷ ಕೆ.ಟಿ.ಹನುಮಂತು, ಬಜರಂಗಸೇನೆ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್, ಡಾ.ಪೂರ್ಣಿಮಾ, ಕಲಾತಪಸ್ವಿ ಟ್ರಸ್ಟ್ ಕಾರ್ಯದರ್ಶಿ ಅನಿಲ್‌ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.