ADVERTISEMENT

ಮಂಡ್ಯ | ರೈಡರ್‌ ಸಿನಿಮಾ ಪೈರಸಿ: ನಿಖಿಲ್‌ ಬೇಸರ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 5:04 IST
Last Updated 27 ಡಿಸೆಂಬರ್ 2021, 5:04 IST
ನಿಖಿಲ್‌ ಕುಮಾರಸ್ವಾಮಿ
ನಿಖಿಲ್‌ ಕುಮಾರಸ್ವಾಮಿ   

ಮಂಡ್ಯ/ಮೈಸೂರು: ಕನ್ನಡ ಸಿನಿಮಾಗಳನ್ನು ಮೂಲೆಗುಂಪು ಮಾಡಲೇಬೇಕು ಎಂಬ ದುರುದ್ದೇಶದಿಂದ ‘ರೈಡರ್‌’ ಸಿನಿಮಾವನ್ನು ಪೈರಸಿ ಮಾಡಲಾಗಿದೆ ಎಂದು ನಟ ನಿಖಿಲ್‌ ಕುಮಾರಸ್ವಾಮಿ ಭಾನುವಾರ ಇಲ್ಲಿ ಬೇಸರ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಮಿಳು ವೆಬ್‌ಸೈಟ್‌ವೊಂದು ರೈಡರ್‌ ಸಿನಿಮಾ ಹ್ಯಾಕ್‌ ಮಾಡಿರುವ ಬಗ್ಗೆ ನಿರ್ಮಾಪಕರು ತಿಳಿಸಿದರು. ಎಲ್ಲ ಕಡೆ ವೀಕ್ಷಣೆಗೆ ಸಿಗುತ್ತಿದೆ ಎಂಬ ವಿಷಯ ತಿಳಿದು ಬೇಸರ ಆಯಿತು. ದಯಮಾಡಿ ಎಲ್ಲರೂ ಥಿಯೇಟರ್‌ನಲ್ಲಿ ಹೋಗಿ ಕನ್ನಡ ಸಿನಿಮಾ ವೀಕ್ಷಿಸಬೇಕು’ ಎಂದು ಮನವಿ ಮಾಡಿದರು.

‘ಬಹಳ ಎಚ್ಚರಿಕೆಯಿಂದ ಇದ್ದರೂ ಕೆಲ ಹ್ಯಾಕರ್‌ಗಳು ರೈಡರ್‌ ಸಿನಿಮಾವನ್ನು ಕದಿಯುವ ಕೆಲಸ ಮಾಡಿದ್ದಾರೆ. ಕನ್ನಡ ಸಿನಿಮಾ ಮುಗಿಸುವ ದುಸ್ಸಾಹಸಕ್ಕೆ ಕೈಹಾಕಿರುವ ವ್ಯಕ್ತಿಗಳಿಗೆ ತಕ್ಕ ಉತ್ತರ ಕೊಡುವ ಕೆಲಸವನ್ನು ಕನ್ನಡಿಗರಾದ ನಾವು ಮಾಡಬೇಕು. ಚಿತ್ರತಂಡವು ಪೈರಸಿ ವಿಚಾರವಾಗಿ ಹೋರಾಡಲಿದೆ‘ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.