ADVERTISEMENT

ಭಾರತೀನಗರ | ವಾಹನ ಡಿಕ್ಕಿ: ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 3:10 IST
Last Updated 22 ಆಗಸ್ಟ್ 2025, 3:10 IST
ಭಾರತೀನಗರ ಸಮೀಪದ ದೊಡ್ಅಡಅರಸಿನಕೆರೆ ಗೇಟ್ಪ‌ ಬಳಿ ಅರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟ ಮುಟ್ಟನಹಳ್ಳಿ ಗ್ರಾಮದ ದಿಲೀಪ ಉರುಫ್ ಗಿರೀಶ್(35)
ಭಾರತೀನಗರ ಸಮೀಪದ ದೊಡ್ಅಡಅರಸಿನಕೆರೆ ಗೇಟ್ಪ‌ ಬಳಿ ಅರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟ ಮುಟ್ಟನಹಳ್ಳಿ ಗ್ರಾಮದ ದಿಲೀಪ ಉರುಫ್ ಗಿರೀಶ್(35)   

ಭಾರತೀನಗರ: ಸಮೀಪದ ದೊಡ್ಡಅರಸಿನಕೆರೆ ಗೇಟ್‌ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮುಟ್ಟನಹಳ್ಳಿ ಗ್ರಾಮದ ದಿಲೀಪ ಉರುಫ್‌ ಗಿರೀಶ್ (35) ಎಂಬುವರು ಮೃತಪಟ್ಟಿದ್ದಾರೆ.

ಗುರುವಾರ ಬೆಳಿಗ್ಗೆ 3 ಗಂಟೆಯ ಸಮಯದಲ್ಲಿ ಗಿರೀಶ್ ಭಾರತೀನಗರಕ್ಕೆ ಬೈಕ್‌ನಲ್ಲಿ ತೆರುಳುತ್ತಿದ್ದಾಗ ಮದ್ದೂರು ಮಳವಳ್ಳಿ ಹೆದ್ದಾರಿಯ ದೊಡ್ಡರಸಿನಕೆರೆ ಗೇಟ್ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಗಿರೀಶ್ ಅವರನ್ನು ತಕ್ಷಣ ಸ್ಥಳೀಯರು ಕೆ.ಎಂ.ದೊಡ್ಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿಲ್ಲ. 

ಕೆ.ಎಂ.ದೊಡ್ಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಸಿಕೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.