ADVERTISEMENT

ಹಳಿ ದಾಟುವಾಗ ರೈಲು ಡಿಕ್ಕಿ: ಸಾವು

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 19:27 IST
Last Updated 25 ಜನವರಿ 2023, 19:27 IST
   

ಮಂಡ್ಯ: ನಗರದ ರೈಲು ನಿಲ್ದಾಣದಲ್ಲಿ ಇಳಿದು ಹಳಿ ದಾಟುವಾಗ, ಚಲಿಸುತ್ತಿದ್ದ ರೈಲು ಡಿಕ್ಕಿಯಾಗಿ ಇಬ್ಬರು ಮಹಿಳೆಯರು ಬುಧವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಚಕ್ರಬಾವಿ ಗ್ರಾಮದ ಲಕ್ಷ್ಮಮ್ಮ (49) ಮತ್ತು ಬೆಂಗಳೂರಿನ ಕಾಮಾಕ್ಷಿಪಾಳ್ಯ ಕಾವೇರಿಪುರದ ಸಿ.ಡಿ.ರಮೇಶ್ ಅವರ ಪತ್ನಿ ಶಶಿಕಲಾ (35) ಮೃತಪಟ್ಟವರು.

ಬೆಳಿಗ್ಗೆ 9.10ರ ಸಮಯದಲ್ಲಿ ಬೆಂಗಳೂರಿನಿಂದ ಕಾಚಿಗುಡ ರೈಲಿನಲ್ಲಿ ಬಂದಿಳಿದ ಅವರು ಮೈಸೂರಿನಿಂದ ಬರುತ್ತಿದ್ದ ಮೈಲಾದುತುರೈ ರೈಲನ್ನು ಗಮನಿಸದೆ ತರಾತುರಿಯಲ್ಲಿ ಹಳಿ ದಾಟಲು ಹೋದಾಗ ಅವಘಡ ನಡೆದಿದೆ.

ADVERTISEMENT

ಲಕ್ಷ್ಮಮ್ಮ ಅವರು ಬಸರಾಳು ಸಮೀಪದ ಜವನೇಗೌಡನಕೊಪ್ಪಲು ಗ್ರಾಮದಲ್ಲಿ ತಿಥಿ ಕಾರ್ಯಕ್ರಮಕ್ಕೆ ಬಂದಿದ್ದರು. ಶಶಿಕಲಾ ಅವರು ಗಿರವಿ ಇಟ್ಟಿದ್ದ ಒಡವೆಗಳನ್ನು ನವೀಕರಣ ಮಾಡಿಸಲು ಬಂದಿದ್ದರು ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದರು.

ಈ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.