ಮಂಡ್ಯ: ಕೊರೊನಾ ಸೋಂಕಿನ ಭೀತಿಯಿಂದ ಬೆಂಗಳೂರಿನಿಂದ ಅಜ್ಜಿಯ ಮನೆಗೆ ಬಂದಿದ್ದ ಇಬ್ಬರು ಯುವಕರು ನಾಗಮಂಗಲ ತಾಲ್ಲೂಕು ದುಮ್ಮಸಂದ್ರ ಗ್ರಾಮದ ಕೆರೆಯಲ್ಲಿ ಮುಳುಗಿ ಭಾನುವಾರ ಮೃತಪಟ್ಟಿದ್ದಾರೆ.
ಬೆಂಗಳೂರಿನ ವಡೇರಹಳ್ಳಿಯಲ್ಲಿ ವಾಸವಿದ್ದ ಭಾಸ್ಕರ್ (21), ಅಭಿಷೇಕ್ (18) ಮೃತ ಯುವಕರು.
ಮೂವರು ಯುವಕರು ತೆಪ್ಪದ ಮೂಲಕ ಈಜಲು ಕೆರೆಗೆ ತೆರಳಿದ್ದರು. ಈಜುವಾಗ ತೆಪ್ಪ ತೂತಾಗಿದೆ. ಶಿವರಾಜು ಈಜಿ ಪಾರಾಗಿದ್ದು ಭಾಸ್ಕರ್, ಅಭಿಷೇಕ್ ಮುಳುಗಿ ಮೃತಪಟ್ಟಿದ್ದಾರೆ.
ಯುವಕರ ಶವಕ್ಕಾಗಿ ಹುಡುಕಾಟ ನಡೆಯುತ್ತಿದೆ. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.