ಮಂಡ್ಯ: ಜಿಲ್ಲೆಯ ಕಿಕ್ಕೇರಿಯಲ್ಲಿ ಪತ್ತೆಯಾಗಿರುವ ಕಾರು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕಾರು ಬಿಜೆಪಿಯವರಿಗೆ ಸೇರಿದ್ದು ಅದರಲ್ಲಿ ₹ 4 ಕೋಟಿ ಹಣವಿದೆ ಎಂದು ಜೆಡಿಎಸ್ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ.ಸ್ಥಳಕ್ಕೆ ಬಂದ ತಹಶಿಲ್ದಾರ್ ಕಾರು ಪರಿಶೀಲಿಸಿದರು. ಮೆಕ್ಯಾನಿಕ್ ಕರೆಸಿ ಕಾರಿನ ಬಾಗಿಲು ತೆರೆಸಲು ಪ್ರಯತ್ನಿಸಿದರು.
ಕಾರಿನ ಮಾಲೀಕ ಮತ್ತು ಚಾಲಕರ ಹುಡುಕಾಟ ನಡೆದಿದೆ. ಕಾರು ತಪಾಸಣೆಯ ನಂತರ ಅದರಲ್ಲಿ ಹಣವಿಲ್ಲ ಎಂದು ತಹಶೀಲ್ದಾರ್ಎಂ.ಶಿವಮೂರ್ತಿ ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.