ADVERTISEMENT

ಮೈಸೂರು: ಎರಡು ಬೈಕ್ – ಲಾರಿ ನಡುವೆ ಅಪಘಾತ, ನಾಲ್ವರು ಸಾವು

​ಪ್ರಜಾವಾಣಿ ವಾರ್ತೆ
Published 24 ಜುಲೈ 2019, 10:36 IST
Last Updated 24 ಜುಲೈ 2019, 10:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ತಿ.ನರಸೀಪುರ ತಾಲ್ಲೂಕಿನ ಇಂಡುವಾಳು ಗ್ರಾಮದ ಬಳಿ ಬುಧವಾರ ನಸುಕಿನಲ್ಲಿ ಲಾರಿ ಮತ್ತು 2 ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಎಚ್.ಡಿ ಕೋಟೆ ತಾಲ್ಲೂಕಿನ ಕಂಚಮಹಳ್ಳಿ ಗ್ರಾಮದ ಮಧುಕುಮಾರ್ (20), ಸಿದ್ದೇಗೌಡನಹುಂಡಿ ಗ್ರಾಮದ ಮಧುಸೂದನ್ (24), ಕಂದೇಗಾಲ ಗ್ರಾಮದ ರಾಘವೇಂದ್ರ (25), ಒಡಿಸ್ಸಾ ರಾಜ್ಯದ ಅಹಮ್ಮದ್ ಖಾನ್ (38) ಮೃತಪಟ್ಟವರು.

ಇವರು ತಾಲ್ಲೂಕಿನ ಹುಣಸೂರು ಗ್ರಾಮದಲ್ಲಿರುವ ಚೇತನ್ ಹಾಗೂ ವೀರಭದ್ರ ಎಂಬುವರ ಮನೆಯಲ್ಲಿ ಹಬ್ಬದೂಟ ಮುಗಿಸಿಕೊಂಡು ವಾಪಸ್ ಮೈಸೂರಿಗೆ ಎರಡು ಬೈಕ್‌ಗಳಲ್ಲಿ ತೆರಳುತ್ತಿದ್ದರು. ಬುಧವಾರ ನಸುಕಿನ 2 ಗಂಟೆ ಸುಮಾರಿನಲ್ಲಿ ಮೈಸೂರಿನಿಂದ ತಿ.ನರಸೀಪುರ ಕಡೆಗೆ ಬರುತ್ತಿದ್ದ ಲಾರಿ ಇಂಡುವಾಳು ಸಮೀಪ ಇವರ ಬೈಕುಗಳಿಗೆ ಡಿಕ್ಕಿ ಹೊಡೆದಿದೆ.

ADVERTISEMENT

ಇವರಲ್ಲಿ ರಾಘವೇಂದ್ರ, ಅಹಮ್ಮದ್ ಖಾನ್ ಹಾಗೂ ಮಧುಕುಮಾರ್ ಸ್ಥಳದಲ್ಲೇ ಮೃತಪಟ್ಟರೆ, ಮಧುಸೂದನ್ ಮೈಸೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.