ADVERTISEMENT

‘ಭೋಗೇಶ್ವರ’ನ ನೆನಪಿನಲ್ಲಿ ನಾಳೆ ಅನ್ನಸಂತರ್ಪಣೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 3:55 IST
Last Updated 20 ಜೂನ್ 2022, 3:55 IST
ಮಿಸ್ಟರ್ ಕಬಿನಿ ಭೋಗೇಶ್ವರ (ಸಂಗ್ರಹ ಚಿತ್ರ)
ಮಿಸ್ಟರ್ ಕಬಿನಿ ಭೋಗೇಶ್ವರ (ಸಂಗ್ರಹ ಚಿತ್ರ)   

ಎಚ್.ಡಿ.ಕೋಟೆ: ಇತ್ತೀಚೆಗೆ ಮೃತಪಟ್ಟ ‘ಮಿಸ್ಟರ್ ಕಬಿನಿ’ ಖ್ಯಾತಿಯ ಮತ್ತು ‘ಭೋಗೇಶ್ವರ’ ಆನೆ ನೆನಪಿನಲ್ಲಿ ರೋಟರಿ ಕ್ಲಬ್‌ನಿಂದ ಮಂಗಳವಾರ (ಜೂ.21) ಚಿರಸ್ಮರಣೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಪಟ್ಟಣದ ಹಳೆ ಆಸ್ಪತ್ರೆ ಆವರ ಣದಲ್ಲಿ ಅಂದು ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.

‘ಭೋಗೇಶ್ವರ ನೀ ಅಮರ’ ಎಂಬ ಸಾಲು ಬರೆದ ಅನ್ನಸಂತರ್ಪಣೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ವೈರಲ್‌ ಆಗಿದೆ. ‘ನಾಗರಹೊಳೆ ಮತ್ತು ಬಂಡೀಪುರ ವ್ಯಾಪ್ತಿಯ ಕಬಿನಿ ಹಿನ್ನೀರಿನಲ್ಲಿ ಕಾಣಸಿಗುತಿದ್ದ ‘ಭೋಗೇಶ್ವರ’ ಆನೆ ಮೃತಪಟ್ಟ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇವೆ. ವನ್ಯಜೀವಿಪ್ರಿಯರು, ಸಾರ್ವಜ ನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿ ಸಬೇಕು’ ಎಂದು ತಾಲ್ಲೂಕಿನ ರೋಟರಿ ಕ್ಲಬ್
ಅಧ್ಯಕ್ಷ ಕೆ.ಎಂ. ಮಹೇಶ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.