ADVERTISEMENT

‘ಫೇಸ್‌ಬುಕ್‌’ನಲ್ಲಿ ಬಿಜೆಪಿ ಸಂಸದರಿಗೆ ನಿಂದನೆ; ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 13:00 IST
Last Updated 15 ಸೆಪ್ಟೆಂಬರ್ 2019, 13:00 IST
   

ಮೈಸೂರು: ಬಿಜೆಪಿ ಸಂಸದರಾದ ಪ್ರತಾಪಸಿಂಹ ಹಾಗೂ ತೇಜಸ್ವಿ ಸೂರ್ಯ ವಿರುದ್ಧ ಫೇಸ್‌ಬುಕ್‌ನಲ್ಲಿ ನಿಂದಿಸಿರುವ ಕುರಿತು ಇಲ್ಲಿನ ಕುವೆಂಪುನಗರ ನಿವಾಸಿ ಸತೀಶ್‌ಗೌಡ ಎಂಬುವವರ ವಿರುದ್ಧ ಅಶೋಕಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ರಾಜ್ಯದಲ್ಲಿ ಪ್ರವಾಹ ಬಂದಿರುವ ಹೊತ್ತಿನಲ್ಲಿ ಪ್ರತಾಪಸಿಂಹ ಹಾಗೂ ತೇಜಸ್ವಿ ಸೂರ್ಯ ಅವರು ಕೇಂದ್ರದಿಂದ ಹಣ ಬಿಡುಗಡೆ ಮಾಡಿಸಿಕೊಡುವ ಬದಲು ‘ಕನ್ನಡ ಕೋಟ್ಯಾಧಿಪತಿ’ ಸ್ಪರ್ಧೆಯಲ್ಲಿ ಹಣ ಗೆಲ್ಲಲು ಆಡುತ್ತಿದ್ದಾರೆ. ಇವರು ‘ಪೂರ್‌ ರಾಸ್ಕಲ್’ ಎಂದು ನಿಂದಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ನಾಗೇಂದ್ರ ಅವರು ದೂರು ನೀಡಿದ್ದಾರೆ.

ADVERTISEMENT

ಸೆಕ್ಷನ್ 504 ಅಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.