ADVERTISEMENT

ಗೋಮಾಂಸ ರಫ್ತು ಮಾಡುವವರಲ್ಲಿ ಮೇಲ್ವರ್ಗದವರು, ಬ್ರಾಹ್ಮಣರೇ ಹೆಚ್ಚು: ಭಗವಾನ್

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 1:28 IST
Last Updated 16 ಡಿಸೆಂಬರ್ 2020, 1:28 IST
ಪ್ರೊ.ಕೆ.ಎಸ್.ಭಗವಾನ್
ಪ್ರೊ.ಕೆ.ಎಸ್.ಭಗವಾನ್   

ಮೈಸೂರು: ಗೋಮಾಂಸದ ರಫ್ತು ಪ್ರಮಾಣವನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರ ಗೋಹತ್ಯೆ ನಿಷೇಧಕ್ಕೆ ಮುಂದಾಗಿದೆ ಎಂದು ಸಾಹಿತಿ ಪ್ರೊ.ಕೆ.ಎಸ್‌.ಭಗವಾನ್‌ ಮಂಗಳವಾರ ಇಲ್ಲಿ ಆರೋಪಿಸಿದರು.

‘ನಮ್ಮ ದೇಶದಿಂದ ಗೋಮಾಂಸ ರಫ್ತುಮಾಡುವವರಲ್ಲಿ ಮೇಲ್ವರ್ಗದವರು, ಬ್ರಾಹ್ಮಣರೇ ಹೆಚ್ಚು ಇದ್ದಾರೆ ಎಂಬುದನ್ನು ಪತ್ರಿಕೆಗಳಲ್ಲಿ ಓದಿದ್ದೇನೆ. ಇಲ್ಲಿ ಗೋಹತ್ಯೆ ನಿಲ್ಲಿಸಿ ಹೊರ ದೇಶಗಳಿಗೆ ರಫ್ತು ಪ್ರಮಾಣ ಹೆಚ್ಚಿಸುವ ಹುನ್ನಾರ, ಇದೆ ಹಿಂದೆ ಅಡಗಿದೆ. ಇದು ಸರಿಯಾದ ಕ್ರಮ ಅಲ್ಲ’ ಎಂದರು.

‘ರೈತರು ಅನುಪಯುಕ್ತವಾದ ದನ, ಎಮ್ಮೆ, ಇತರ ಜಾನುವಾರುಗಳನ್ನು ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ. ಏಕೆಂದರೆ ಅದು ಆರ್ಥಿಕವಾಗಿ ಹೊರೆಯಾಗುತ್ತದೆ. ಅದನ್ನು ಸಾಕುವುದು ಕಷ್ಟ. ಆದ್ದರಿಂದ ಅವುಗಳನ್ನು ಮಾರಾಟ ಮಾಡುವರು. ಜಾನುವಾರುಗಳ ವಿಚಾರದಲ್ಲಿ ಹಳ್ಳಿಯ ರೈತರು ಯಾವುದೇ ಭಾವುಕವಾದ ವಿಚಾರಗಳನ್ನು ಇಟ್ಟುಕೊಂಡಿಲ್ಲ. ಇದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.