ADVERTISEMENT

ಮೈಸೂರು: ಕ್ರಿಕೆಟ್ ಆಡುತ್ತಿದ್ದ ಯುವಕರಿಗೆ ಬಸ್ಕಿ!

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 13:01 IST
Last Updated 26 ಮಾರ್ಚ್ 2020, 13:01 IST

ಮೈಸೂರು: ಇಲ್ಲಿನ ಕೆ.ಆರ್.ನಗರ ತಾಲ್ಲೂಕಿನ ಲಾಲನಹಳ್ಳಿಯಲ್ಲಿ ‘ಲಾಕ್‌ಡೌನ್‌’ ಆದೇಶ ಉಲ್ಲಂಘಿಸಿ ಕ್ರಿಕೆಟ್ ಆಡುತ್ತಿದ್ದ ಯುವಕರನ್ನು ಬಸ್ಕಿ ಹೊಡೆಸಿದ ಪೊಲೀಸರು ಬ್ಯಾಟ್‌ ಹಿಡಿದು ಎಚ್ಚರಿಕೆ ನೀಡಿದ್ದಾರೆ.

ಪದೇ ಪದೇ ಎಚ್ಚರಿಕೆ ನೀಡಿದರೂ ಕೇಳದೇ ಯುವಕರು ಕ್ರಿಕೆಟ್ ಆಡುತ್ತಿದ್ದರು. ಇದರಿಂದ ಕೋಪಗೊಂಡ ಪೊಲೀಸರು ಎಲ್ಲರನ್ನೂ ಹಿಡಿದು ಬಸ್ಕಿ ಹೊಡೆಸಿದರು. ಕಿವಿ ಹಿಡಿದು ನಿಲ್ಲಿಸಿದರು. ಮತ್ತೆ ಹೀಗೆ ಮಾಡಿದರೆ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT