ADVERTISEMENT

ಜಾನುವಾರು ಕಳವು: ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 15:38 IST
Last Updated 30 ಜುಲೈ 2023, 15:38 IST
ಎಚ್.ಡಿ.ಕೋಟೆ ತಾಲ್ಲೂಕಿನ ಕೆ.ಯಡತೊರೆ ಬಳಿ ಕಳುವಾಗಿದ್ದ ಜಾನುವಾರುಗಳು ಹುಣಸೂರು ಪಟ್ಟಣದ ಬಳಿ ಆರೋಪಿಗಳಿಂದ ಪೊಲೀಸರು ವಶಪಡಿಸಿಕೊಂಡಿರುವ ಜಾನುವಾರುಗಳು
ಎಚ್.ಡಿ.ಕೋಟೆ ತಾಲ್ಲೂಕಿನ ಕೆ.ಯಡತೊರೆ ಬಳಿ ಕಳುವಾಗಿದ್ದ ಜಾನುವಾರುಗಳು ಹುಣಸೂರು ಪಟ್ಟಣದ ಬಳಿ ಆರೋಪಿಗಳಿಂದ ಪೊಲೀಸರು ವಶಪಡಿಸಿಕೊಂಡಿರುವ ಜಾನುವಾರುಗಳು   

ಎಚ್.ಡಿ.ಕೋಟೆ: ಜಾನುವಾರು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಹುಣಸೂರು ಬಳಿ ವಶಕ್ಕೆ ಪಡೆದಿದ್ದು, ಪಟ್ಟಣದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

₹ 2 ಲಕ್ಷ ಮೌಲ್ಯದ ಸುಮಾರು ಐದು ಹಸುಗಳು ಹಾಗೂ ₹ 43‌ ಸಾವಿರ ನಗದು ಹಣ ವಶಕ್ಕೆ ಪಡೆದಿದ್ದಾರೆ.

‘ಪ್ರಕರಣದಲ್ಲಿ ಕೇರಳ ಮೂಲದ ಇಬ್ಬರು ವ್ಯಕ್ತಿಯನ್ನು ಹಾಗೂ ಪೊನ್ನಂಪೇಟೆ ಮೂಲದ ಒಬ್ಬ ವ್ಯಕ್ತಿಯನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಶಡಿಸಿಕೊಳ್ಳಲಾಗಿದೆ’ ಎಂದು ವೃತ ನಿರೀಕ್ಷಕ ಶಬ್ಬೀರ್ ಹುಸೇನ್  ತಿಳಿಸಿದ್ದಾರೆ.

ADVERTISEMENT

ತಾಲೂಕಿನ ಕೆ.ಯಡತೊರೆಯ ಕುಮಾರಿ ಎಂಬುವವರ ₹ 1 ಲಕ್ಷ ಮೌಲ್ಯದ 2 ಹಸು, 1 ಕರು, 2 ಟಗರುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ನೀಡಿದ ದೂರಿನ ಮೇರೆಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕ್ರಮ ಕೈಗೊಳ್ಳಲಾಗಿತ್ತು.

ಕಾರ್ಯಾಚರಣೆಯಲ್ಲಿ ಠಾಣಾ ಪಿಎಸ್‌ಐ ರಾಮು, ಸೈಯದ್‌ ಕಬೀರುದ್ದಿನ್, ಸುನೀಲ್, ಎಚ್.ಎಸ್.ಮೋಹನ್, ರಿತೀಶ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.