ಎಚ್.ಡಿ.ಕೋಟೆ : ತಾಲ್ಲೂಕಿನ ಬೀಚನಹಳ್ಳಿಯಲ್ಲಿನ ಕಬಿನಿ ಜಲಾಶಯದ ಮುಖ್ಯದ್ವಾರದ ಪೊಲೀಸ್ ಭದ್ರತಾ ಕೊಠಡಿಗೆ ಲಾರಿಯೊಂದು ಗುದ್ದಿ ಅವಘಡ ಸಂಭವಿಸಿದೆ.
ಲಾರಿ ಚಾಲಕನು ಕಬಿನಿ ಜಲಾಶಯದ ಮುಖ್ಯ ದ್ವಾರದ ಬಳಿ ಲಾರಿ ನಿಲ್ಲಿಸಿ ಪೊಲೀಸ್ ಸಿಬ್ಬಂದಿ ಬಳಿ ವಿಳಾಸ ತಿಳಿಯಲು ಬಂದರು. ಇಳಿಜಾರಿನಲ್ಲಿ ಲಾರಿ ನಿಂತಿದ್ದರಿಂದ ಆಯತಪ್ಪಿ ಪೊಲೀಸ್ ಭದ್ರತಾ ಕೊಠಡಿಗೆ ಗುದ್ದಿದೆ. ಅದೃಷ್ಟವಶಾತ್ ಕೊಠಡಿಯೊಳಗೆ ಯಾರೂ ಇರದ ಕಾರಣ, ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಕಲ್ಲಿನ ಕಾಂಪೌಂಡ್ ನೆಲಸಮವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಜಲಾಶಯದ ಭದ್ರತಾ ಆರಕ್ಷಕ ನಿರೀಕ್ಷಕ ಶಿವಲಿಂಗ ಕುರೆನ್ನವರ್ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಅಪಘಾತದ ಸ್ಥಳ ಪರಿಶೀಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.