ADVERTISEMENT

ಮೈಸೂರು: ಗಾಂಜಾ ಸಾಗಾಣೆ, ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2018, 19:32 IST
Last Updated 1 ಅಕ್ಟೋಬರ್ 2018, 19:32 IST

ಮೈಸೂರು: ಇಲ್ಲಿನ ನಜರ್‌ಬಾದ್‌ನಲ್ಲಿರುವ ಇಂದಿರಾ ಕ್ಯಾಂಟೀನ್ ಮುಂಭಾಗದ ಪಾದಾಚಾರಿ ಮಾರ್ಗದಲ್ಲಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಉದಯಗಿರಿಯ ದೇವನೂರು ಕೆರೆ ನಿವಾಸಿ ಬದ್ರುನ್ನೀಸ (30) ಹಾಗೂ ಕಲ್ಯಾಣಗಿರಿಯ ಕೆಎಚ್‌ಬಿ ಕಾಲೊನಿ ನಿವಾಸಿ ಇಸ್ಮಾಯಿಲ್ ಷರೀಫ್ (52) ಎಂಬುವವರನ್ನು ಅಪರಾಧ ಪತ್ತೆ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಇವರಿಂದ 269 ಗ್ರಾಂ ತೂಕದ ಗಾಂಜಾ ಮತ್ತು ₹ 580 ನಗದನ್ನು ವಶಪಡಿಸಿಕೊಂಡಿದ್ದಾರೆ. ಇವರ ವಿರುದ್ಧ ನಜರ್‌ಬಾದ್‌ ಠಾಣೆಯಲ್ಲಿ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT