ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನ ಬೂದನೂರಿಗೆ ಸಲಗವೊಂದು ಸೋಮವಾರ ಬೆಳಿಗ್ಗೆ ನುಗ್ಗಿದ್ದು, ಹಲವು ಮನೆಗಳಿಗೆ ಹಾನಿ ಮಾಡಿದೆ.
ಆನೆ ನೋಡಲು ಜನ ಮುಗಿಬಿದ್ದಿದ್ದರಿಂದ ಸಲಗವೂ ಗಾಬರಿಯಾಗಿದೆ. ಗ್ರಾಮಸ್ಥರ ಗಲಾಟೆ, ಚೀರಾಟಕ್ಕೆ ಗ್ರಾಮದ ಬೀದಿಗಳಲ್ಲಿ ಸುತ್ತಾಡಿರುವ ವಿಡಿಯೊ ಕೂಡ ವೈರಲ್ ಆಗಿದೆ.
ಕಲ್ಲುಗಳನ್ನು ಆನೆಯತ್ತ ಎಸೆದು ಗ್ರಾಮದಿಂದ ಹೊರವಲಯಕ್ಕೆ ಅಟ್ಟಲು ಜನರು ಗುಂಪಾಗಿ ಸಾಗುತ್ತಿರುವ ದೃಶ್ಯವೂ ಸೆರೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.