ADVERTISEMENT

ಹುಣಸೂರು: ಕೌಟುಂಬಿಕ ಕಲಹ– ವ್ಯಕ್ತಿಯ ಬರ್ಬರ ಹತ್ಯೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 5:05 IST
Last Updated 19 ಸೆಪ್ಟೆಂಬರ್ 2021, 5:05 IST
ದೊಡ್ಡರಾಜ ನಾಯಕ
ದೊಡ್ಡರಾಜ ನಾಯಕ   

ಹುಣಸೂರು: ತಾಲ್ಲೂಕಿನ ಧರ್ಮಾಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ದೊಡ್ಡರಾಜ ನಾಯಕ (45) ಎಂಬುವರನ್ನು ಕೆಂಡನಾಯಕ ಎಂಬಾತ ಮಾರಕಾಸ್ತ್ರದಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.

ದೊಡ್ಡರಾಜನಾಯಕ ಮತ್ತು ಕೆಂಡನಾಯಕ ಸಂಬಂಧಿಗಳಾಗಿದ್ದು, ಇಬ್ಬರ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿತ್ತು. ರಾತ್ರಿ ದೊಡ್ಡರಾಜನಾಯಕ ಕಿರಾಣಿ ಅಂಗಡಿಯಿಂದ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಕೆಂಡನಾಯಕ ಜಗಳವಾಡಿ ಹಲ್ಲೆ ನಡೆಸಿದ್ದಾನೆ. ಪ್ರಜ್ಞೆ ಕಳೆದುಕೊಂಡ ದೊಡ್ಡರಾಜನಾಯಕ ಅವರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ, ಹೊಟ್ಟೆ ಬಗೆದು ಕರುಳು ಹೊರತೆಗೆದು ಕ್ರೂರವಾಗಿ ಕೊಲೆಗೈದಿದ್ದಾನೆ.

ಆರೋಪಿಯನ್ನು ಬಿಳಿಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ರವಿಪ್ರಸಾದ್,ಸಿಪಿಐ ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.