ADVERTISEMENT

ಪವರ್‌ಗ್ರಿಡ್ ವಿರುದ್ಧ ಮತ್ತೆ ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 14:43 IST
Last Updated 23 ಡಿಸೆಂಬರ್ 2019, 14:43 IST

ಮೈಸೂರು: ತಾಲ್ಲೂಕಿನ ಇಲವಾಲ ಹೋಬಳಿಯಲ್ಲಿ ತಮ್ಮ ಜಮೀನಿನ ಮೇಲೆ ಪವರ್‌ ಗ್ರಿಡ್‌ ವಿದ್ಯುತ್ ಲೈನ್ ಹಾಕಲು ಭಾನುವಾರ ಬಂದಿದ್ದ ಸಿಬ್ಬಂದಿ ಮತ್ತು ಪೊಲೀಸರಿಗೆ ರೈತರು ಪ್ರತಿರೋಧ ವ್ಯಕ್ತಪಡಿಸಿದರು.

ಇದರಿಂದ ಫಲವತ್ತಾದ ರೈತರ ಜಮೀನು, ತೋಟಗಳು ಹಾಳಾಗುತ್ತವೆ. ಈ ಲೈನ್‌ಗೆ ಪರ್ಯಾಯ ಮಾರ್ಗವನ್ನು ಹುಡುಕಬೇಕು ಎಂದು ಅವರು ಮನವಿ ಮಾಡಿದರು.

ಇದಕ್ಕೂ ಮುನ್ನ ಜೂನ್ ತಿಂಗಳಿನಲ್ಲಿ ಮೈದುನಹಳ್ಳಿಯಲ್ಲಿರುವ ಪವರ್‌ ಗ್ರಿಡ್ ಕಾರ್ಪೊರೇಷನ್‌ ಆಫ್ ಇಂಡಿಯಾ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿದ್ದರು. ರಿಯಲ್‌ ಎಸ್ಟೇಟ್ ಲಾಬಿಯಿಂದಾಗಿ ರೈತರ ಜಮೀನಿನ ಮೇಲೆ ಲೈನ್ ಎಳೆಯಲಾಗುತ್ತಿದೆ. ಇದನ್ನು ಬಿಟ್ಟು ನಿವೇಶನಗಳಾಗಿರುವ ಕಡೆ ಅತ್ಯಂತ ಕಡಿಮೆ ದೂರದಲ್ಲಿ ಲೈನ್ ಎಳೆಯಬಹುದು ಎಂದು ರೈತರು ಹೇಳಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.