ADVERTISEMENT

ಅಸಮರ್ಥರನ್ನು ವಾಪಸ್ ಕರೆಸಿಕೊಳ್ಳಿ: ವಿಶ್ವನಾಥ್‌

ಮುಖ್ಯಮಂತ್ರಿಗೆ ಮನವಿ ಮಾಡಿದ ಮಾಜಿ ಸಚಿವ, ಬಿಜೆಪಿ ಮುಖಂಡ ಎಚ್‌.ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 16:45 IST
Last Updated 30 ಮಾರ್ಚ್ 2020, 16:45 IST
   

ಮೈಸೂರು: ‘ಮೈಸೂರಿನಲ್ಲಿ ಕೊರೊನಾ ಮಹಾಮಾರಿಯ ನರ್ತನ ಹೆಚ್ಚಳಗೊಂಡಿದೆ. ಕೆಲವು ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧವಿಲ್ಲ ಎನ್ನುವಂತಿದ್ದಾರೆ. ಇಂತಹ ಅಸಮರ್ಥರನ್ನು ವಾಪಸ್‌ ಕರೆಸಿಕೊಂಡು, ಸಮರ್ಥರನ್ನು ನಿಯೋಜಿಸಿ’ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಎಚ್‌.ವಿಶ್ವನಾಥ್‌ ವಿಡಿಯೊ ಕ್ಲಿಪ್ಪಿಂಗ್ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

‘ನಂಜನಗೂಡಿನಲ್ಲಿ ನರಕ ಸದೃಶ್ಯ ವಾತಾವರಣ ನಿರ್ಮಾಣಗೊಳ್ಳುತ್ತಿದೆ. ಕೋವಿಡ್–19 ಮರಣ ಮೃದಂಗ ಬಾರಿಸುವಲ್ಲಿ ಮೈಸೂರು ಮುಂಚೂಣಿಯಲ್ಲಿ ನಿಲ್ಲುವ ಆತಂಕ ಎದುರಾಗಿದೆ. ಇದನ್ನು ತಪ್ಪಿಸಲು ವಿಶೇಷ ತಂಡವೊಂದನ್ನು ರಚಿಸಿ. ಜನರು ಕೊರೊನಾ ಮಹಾಮಾರಿಯಿಂದ ನಲುಗುತ್ತಿರುವುದನ್ನು ತಪ್ಪಿಸಿ’ ಎಂದು ಮುಖ್ಯಮಂತ್ರಿಯಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ.

ವಿಶ್ವನಾಥ್ ಮನವಿಯ ವಿಡಿಯೊ, ಈ ಭಾಗದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.