ಮೈಸೂರು: ಮೈಸೂರು ಎಂದಾಕ್ಷಣ ನೂರೊಂದು ನೆನಪುಗಳು ಮನಸ್ಸಿನಲ್ಲಿ ಮೂಡುತ್ತವೆ ಎಂದು ನಟಿ ಸುಹಾಸಿನಿ ತಿಳಿಸಿದರು.
ಇಲ್ಲಿನ ಕಾವೇರಿ ಹೃದಯ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೋಮವಾರ ಅವರು ಕಾವೇರಿ ಗುಣಶೀಲ ಐವಿಎಫ್ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಬಂಧನ ಸಿನಿಮಾದ ಮೊದಲ ಶೂಟಿಂಗ್ ಇಲ್ಲಿಯೆ ನಡೆಯಿತು. ಇಲ್ಲಿನ ರಸ್ತೆಗಳಲ್ಲಿ ಓಡಾಡುವುದು ಎಂದರೆ ಅದು ಬಹುದೊಡ್ಡ ಸಂತಸ ತರಿಸುತ್ತದೆ ಎಂದರು. ನಂತರ ನೂರೊಂದು ನೆನಪು ಎದೆಯಾಳದಿಂದ ಹಾಡಿನ ತುಣುಕನ್ನು ಹಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.