ADVERTISEMENT

ಐಪಿಎಲ್ ಬೆಟ್ಟಿಂಗ್: 8 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 1:56 IST
Last Updated 2 ಅಕ್ಟೋಬರ್ 2020, 1:56 IST

ಮೈಸೂರು: ಐಪಿಎಲ್ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಬೆಟ್ಟಿಂಗ್‌ ನಡೆಸು ತ್ತಿದ್ದ ಎಂಟು ಮಂದಿಯನ್ನು‌ ಗುರುವಾರ ವಿದ್ಯಾರಣ್ಯಪುರಂ ಪೊಲೀಸರು ಬಂಧಿಸಿದ್ದಾರೆ.

ಬೆಟ್ಟಿಂಗ್‌ಗೆ ಬಳಕೆ ಮಾಡಿದ ₹ 9,810 ನಗದು, ಎಂಟು ಮೊಬೈಲ್, ಐದು ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಚಾಮರಾಜನಗರದ ಹಾಲೂರಿನ ಗುರುಪ್ರಸಾದ್, ಮಹದೇವಪುರದ ಅರುಣ್‌, ಗಜೇಂದ್ರ, ಕೃಷ್ಣ, ಜೆ.ಪಿ.ನಗರದ ಪವನ್, ರಮಾಭಾಯಿ ನಗರದ ಮೋಹನ್, ಗೆಜ್ಜಗಳ್ಳಿಯ ವಿನೋದ್ ಹಾಗೂ ವಿನೋದ್‌ ರಾಜ್ ಬಂಧಿತ ಆರೋಪಿಗಳು.

ADVERTISEMENT

ಆರೋಪಿಗಳು ಜೆ.ಪಿ.ನಗರದ ಕೊನೆ ಬಸ್‌ ತಂಗುದಾಣದ ಬಳಿಯ ಸಾಯಿ ಚಹಾ ಅಂಗಡಿ ಹಿಂಭಾಗ ಬೆಟ್ಟಿಂಗ್ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ದಾಳಿ ಮಾಡಿದ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಇವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.