ADVERTISEMENT

ಮತ ನೀಡಲು ಮನವಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 9:54 IST
Last Updated 21 ಡಿಸೆಂಬರ್ 2019, 9:54 IST

ಮೈಸೂರು: ಕರ್ನಾಟಕ ಪ್ರದೇಶ ಕುರುಬರ ಸಂಘದ 2019-2024ನೇ ಸಾಲಿನ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಹಾಲಿ ನಿರ್ದೇಶಕರೂ ಸ್ಪರ್ಧಿಸಿದ್ದು, ಮತ ನೀಡಿ ಎಂದು ಮನವಿ ಮಾಡಿಕೊಂಡರು.

ಅಭ್ಯರ್ಥಿಗಳಾದ ಬಿ.ಸುಬ್ರಹ್ಮಣ್ಯ, ಜೆ.ಗೋಪಿ, ರೇಖಾ ಪ್ರಿಯದರ್ಶಿನಿ, ಯು.ಅಭಿಲಾಷ್, ಆರ್.ನಾಗರಾಜು, ಕೆ.ಮಾದೇಗೌಡ ಹಾಲಿ ನಿರ್ದೇಶಕರಿದ್ದು, ಮತ್ತೊಂದು ಬಾರಿ ಅವಕಾಶ ಕೊಡಿ ಎಂದು ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೋರಿದರು.

‘ಹಿಂದಿನ ಸಾಲಿನಲ್ಲಿ ಆಯ್ಕೆಯಾಗಿದ್ದ ನಾವು ನೆನಪುಳಿಯುವ ಹಲ ಕೆಲಸಗಳನ್ನು ಮಾಡಿದ್ದೇವೆ. ನಗರದಲ್ಲಿ ₹ 25 ಕೋಟಿ ವೆಚ್ಚದಲ್ಲಿ ಕನಕ ಎಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ ಬಹಳಷ್ಟು ಶ್ರಮಿಸಿದ್ದು, ಮುಂದಿನ ವರ್ಷದಲ್ಲಿ ಕಾಲೇಜು ಆರಂಭವಾಗಲಿದೆ. ಸಮಾಜದ ಸಾಮಾಜಿಕ ಬೆಳವಣಿಗೆಗಾಗಿ ಸಂಘಕ್ಕೆ ಒಂದು ಕಟ್ಟಡ ನಿರ್ಮಿಸಲು ಮುಡಾದಿಂದ 27 ಗುಂಟೆ ಸಿ.ಎ.ನಿವೇಶವನ್ನು ವಸಂತನಗರದಲ್ಲಿ ಪಡೆದುಕೊಂಡಿದ್ದೇವೆ’ ಎಂದು ಹೇಳಿದರು.

ADVERTISEMENT

ಜೆ.ಗೋಪಿ ಮಾತನಾಡಿ ಮುಂದಿನ ಅವಧಿಯ ರೂಪುರೇಷೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.