ವರುಣಾ: ಸಮೀಪದ ಎಂ.ಬಿ.ಹಳ್ಳಿ ನಾಗೇಂದ್ರ ಎಂಬುವವರ ತೋಟದ ಬಳಿ ಶುಕ್ರವಾರ ಚಿರತೆ ಬೋನಿಗೆ ಬಿದ್ದಿದೆ.
ಈ ಭಾಗದಲ್ಲಿಕೆಲವು ದಿನಗಳಿಂದ ಚಿರತೆ ಓಡಾಡುವುದನ್ನು ಗಮನಿಸಿದ ಗ್ರಾಮಸ್ಥರು, ಅರಣ್ಯ ಇಲಾಖೆಗೆ ದೂರು ನೀಡಿದ್ದರು.
‘ಸುಮಾರು ಐದು ವರ್ಷದ ಗಂಡು ಚಿರತೆ ಸೆರೆ ಸಿಕ್ಕಿದೆ. ಪಶು ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಲಾಗಿದ್ದು, ನಾಗರಹೊಳೆ ಅರಣ್ಯಕ್ಕೆ ಬಿಡಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ವಿಜಯಕುಮಾರ ಮಾಹಿತಿ ನೀಡಿದರು.
ಅರಣ್ಯ ರಕ್ಷಕರಾದ ಪಾಪನಾಯ್ಕ, ಪಿ.ಎನ್.ಜಗದೀಶ್, ಎಂ.ಜಗದೀಶ್, ಶ್ರೀನಿವಾಸ್, ರವಿ, ಗಣೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.