ADVERTISEMENT

ಮಾದಪ್ಪನ ಗುಡ್ಡದಲ್ಲಿ ಸಿಡಿಮದ್ದು ಸಿಡಿದು ನಾಯಿ ಸಾವು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 3:01 IST
Last Updated 16 ನವೆಂಬರ್ 2021, 3:01 IST

ಮೈಸೂರು: ನಂಜನಗೂಡು ತಾಲ್ಲೂಕಿನ ಕಪ್ಪಸೋಗೆ ಗ್ರಾಮದ ಬಳಿಯ ಮಾದಪ್ಪನ ಗುಡ್ಡದಲ್ಲಿ ಸಿಡಿಮದ್ದು ಸಿಡಿದು ನಾಯಿಯೊಂದು ಮೃತಪಟ್ಟಿದೆ.

ಗ್ರಾಮದ ಸಿದ್ಧಮಲ್ಲಪ್ಪ ಅವರು ಕುರಿಗಳನ್ನು ಮೇಯಿಸಲು ಗುಡ್ಡಕ್ಕೆ ಹೋಗಿದ್ದರು. ಈ ವೇಳೆ ಇವರ ಸಾಕು ನಾಯಿಯು ಗುಡ್ಡದಲ್ಲಿ ಬಿದ್ದಿದ್ದ ವಸ್ತುವನ್ನು ಹಲ್ಲಿನಿಂದ ಕಡಿಯಿತು. ಆಗ ಸ್ಫೋಟಗೊಂಡು ಮೃತಪಟ್ಟಿತು. ಯಾರೋ ವನ್ಯಜೀವಿಗಳನ್ನು ಬೇಟೆಯಾಡಲು ಸಿಡಿಮದ್ದನ್ನು ಕಾಗದದಲ್ಲಿ ಇಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹುಲ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT