ADVERTISEMENT

ದಸರಾಗೆ ಕೆಲವೇ ದಿನ ಬಾಕಿ– ಹೊಸ ಮೇಯರ್ ನಗರ ಸಂಚಾರ, ದೂರಿನ ಸುರಿಮಳೆ

ದಸರಾಗೆ ಕೆಲವೇ ದಿನ ಬಾಕಿ: ರಸ್ತೆ ಗುಂಡಿಗಳ ಮುಚ್ಚಲು ಶಿವಕುಮಾರ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 5:50 IST
Last Updated 14 ಸೆಪ್ಟೆಂಬರ್ 2022, 5:50 IST
ಮೈಸೂರಿನ ಸಬ್‌ಅರ್ಬನ್‌ ಬಸ್‌ನಿಲ್ದಾಣದ ಸಮೀಪ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯನ್ನು ಮೇಯರ್‌ ಶಿವಕುಮಾರ್‌ ಮಂಗಳವಾರ ಪರಿಶೀಲಿಸಿ, ಪಾಲಿಕೆಯ ಅಧಿಕಾರಿಗಳಿಂದ ಮಾಹಿತಿ ‍ಪಡೆದರು ಪ್ರಜಾವಾಣಿ ಚಿತ್ರ
ಮೈಸೂರಿನ ಸಬ್‌ಅರ್ಬನ್‌ ಬಸ್‌ನಿಲ್ದಾಣದ ಸಮೀಪ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯನ್ನು ಮೇಯರ್‌ ಶಿವಕುಮಾರ್‌ ಮಂಗಳವಾರ ಪರಿಶೀಲಿಸಿ, ಪಾಲಿಕೆಯ ಅಧಿಕಾರಿಗಳಿಂದ ಮಾಹಿತಿ ‍ಪಡೆದರು ಪ್ರಜಾವಾಣಿ ಚಿತ್ರ   

ಮೈಸೂರು: ಒಳಚರಂಡಿ ನೀರು ರಸ್ತೆಗೆಹರಿದು ಬರುತ್ತಿದೆ... ರಸ್ತೆಗಳಿಗೆ ಡಾಂಬರು ಹಾಕಿಸದೇ ಮಳೆಗಾಲದಲ್ಲಿ ಕೆಸರುಮಯವಾಗುತ್ತಿದೆ... ರಸ್ತೆ ಗುಂಡಿಗಳಿಂದ ಅಪಘಾತ ಸಂಭವಿಸು ತ್ತಿವೆ...

ನಗರದ ವಿವಿಧೆಡೆಮಂಗಳವಾರ ಮೊದಲ ನಗರ ಸಂಚಾರ ನಡೆ ಸಿದಮೇಯರ್‌ ಶಿವಕುಮಾರ್‌ಗೆ ಸ್ಥಳೀಯರಿಂದ ತೂರಿಬಂದ ಪ್ರಶ್ನೆಗಳಿವು.

ಬೆಂಗಳೂರು ರಸ್ತೆಯ ಫೈವ್‌ಲೈಟ್‌ ವೃತ್ತದಿಂದ ಮೊದಲ ‘ನಗರ ಪರಿ ಶೀಲನಾ ಯಾತ್ರೆ’ ಆರಂಭಿಸಿದ ‌ಶಿವ ಕುಮಾರ್‌, ಎಫ್‌ಟಿಎಸ್‌ ವೃತ್ತ, ಸಬ್‌ ಅರ್ಬನ್‌ ಬಸ್‌ನಿಲ್ದಾಣ, ಛತ್ರಿ ಮರ, ಸಂಗಮ್‌ ಟಾಕೀಸ್‌ ರಸ್ತೆ,ಗಾಂಧಿಚೌಕ, ಪುರಭವನ, ಸಿದ್ಧಪ್ಪ ವೃತ್ತ, ನಂಜುಮಳಿಗೆ, ಅಶೋಕ ವೃತ್ತದವರೆಗೂ ಸಾಗಿ ಜನರ ಸಮಸ್ಯೆಗಳನ್ನು ಆಲಿಸಿದರು.

ADVERTISEMENT

ರಸ್ತೆ ಡಾಂಬರು, ಸ್ವಚ್ಛತೆ, ಒಳ ಚರಂಡಿ ಸಮಸ್ಯೆಗಳ ಬಗ್ಗೆ ಜನರಿಂದ ದೂರು ಬಂದವು. ಕೂಡಲೇ ಪರಿಹರಿಸು ವಂತೆ ವಾಣಿವಿಲಾಸ ನೀರು ಸರಬರಾಜು ಮಂಡಳಿ, ಪಾಲಿಕೆ ಅಧಿಕಾರಿಗಳಿಗೆ ಮೇಯರ್‌ ಸೂಚನೆ ನೀಡಿದರು.

‘ಗಾಂಧಿ ಚೌಕದಲ್ಲಿ ಪಾದ ಚಾರಿ ಮಾರ್ಗದಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಜನ ಸಂಚಾರಕ್ಕೆ ತೊಂದರೆಯಾಗಿದೆ. ಕೂಡಲೇ ಪಾದಚಾರಿ ಮಾರ್ಗ ನಿರ್ಮಾ ಣಕ್ಕೆವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ ದ್ದೇನೆ.ಚಾಮರಾಜ ಜೋಡಿ ರಸ್ತೆ, ಝಾನ್ಸಿರಾಣಿ ಲಕ್ಷ್ಮಿಬಾಯಿ ರಸ್ತೆ, ಸಯ್ಯಾಜಿರಾವ್ ರಸ್ತೆ ಹೊರತುಪಡಿಸಿ ಎಲ್ಲ ರಸ್ತೆಗಳು ಗುಂಡಿ ಬಿದ್ದಿವೆ. ಕೂಡಲೇ ಡಾಂಬರು ಆಗಬೇಕು’ ಎಂದು ಶಿವಕುಮಾರ್‌ ಹೇಳಿದರು.

‘ನಾಡಹಬ್ಬ ದಸರೆ ಆರಂಭಕ್ಕೆ ಕೆಲವೇ ದಿನಗಳಿವೆ. ಜನರ ಸಮಸ್ಯೆ ಪರಿಹರಿಸಲು‍ಪರಿಶೀಲನೆ ಕೈಗೊಂಡಿ ದ್ದೇನೆ. ಮೈಸೂರು ಸ್ವಚ್ಛ ನಗರ, ಪಾರಂಪರಿಕ ನಗರವೆಂಬ ಶ್ರೇಯಕ್ಕೆ ಧಕ್ಕೆ ಬಾರದಂತೆ ಕ್ರಮ ಕೈಗೊಳ್ಳಲು ಪಾಲಿಕೆ ಬದ್ಧವಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ‌’ ಎಂದರು.

‘ಶಾಸಕ ಎಲ್‌.ನಾಗೇಂದ್ರ ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ತಂದಿದ್ದಾರೆ. ಕಾಮಗಾರಿಗಳ ಟೆಂಡರ್‌ ಪೂರ್ಣವಾಗಿದ್ದು, ಮಳೆ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ದಸರಾ ವೇಳೆಗೆ ಗುಂಡಿ ಮುಚ್ಚಲು ತುರ್ತು ಕ್ರಮವಹಿಸಲು ತಿಳಿಸಲಾಗಿದೆ. ಯುಜಿಡಿ ಕಾಮಗಾರಿ ನಡೆದ ನಂತರವೇ ರಸ್ತೆ ಅಭಿವೃದ್ಧಿ ನಡೆಯ ಬೇಕು.ಪುರಭವನ ಪಾರ್ಕಿಂಗ್‌ನಲ್ಲಿ 200 ವಾಹನ ನಿಲುಗಡೆಗೆ ಅವಕಾಶ ನೀಡಲಾಗುವುದು’ ಎಂದು ತಿಳಿಸಿದರು.

‘ಸಬ್‌ ಅರ್ಬನ್‌ ಬಸ್‌ ನಿಲ್ದಾಣದ ಹಿಂಭಾಗದಲ್ಲಿ ಒಳಚರಂಡಿ ಸಮಸ್ಯೆ ಯಿದ್ದು, ರಸ್ತೆ ಮೇಲೆಯೇ ಚರಂಡಿ ನೀರು ಹರಿಯುತ್ತಿದೆ. ಯುಜಿಡಿ ಲೇನ್‌ ಸಂಪರ್ಕ ಕಲ್ಪಿಸದವರಿಗೆ ನೋಟಿಸ್‌ ನೀಡಿ ದಂಡ ವಸೂಲು ಮಾಡಲಾಗುವುದು’ ಎಂದರು.

ಪಾಲಿಕೆ ಸದಸ್ಯರಾದಎಂ.ಸತೀಶ್, ಎಂ.ಬಿ.ನಾಗರಾಜ್, ಎಂಜಿನಿಯರ್‌ ಗಳಾದ ಸಿಂಧು,ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.