ADVERTISEMENT

ಮುದ್ದುಕೃಷ್ಣ ದಂಪತಿಯ ಅಂತ್ಯಕ್ರಿಯೆ ಇಂದು

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 20:05 IST
Last Updated 9 ಜುಲೈ 2019, 20:05 IST

ಮೈಸೂರು: ಉತ್ತರ ಪ್ರದೇಶದ ಲಖನೌ ಸಮೀಪ ಸೋಮವಾರ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ರಂಗಕರ್ಮಿ ಮುದ್ದುಕೃಷ್ಣ ಹಾಗೂ ಪತ್ನಿ ಇಂದ್ರಾಣಿ ಅವರ ಅಂತ್ಯಕ್ರಿಯೆಯು ಯಾವುದೇ ಧಾರ್ಮಿಕ ವಿಧಿವಿಧಾನಗಳು ಇಲ್ಲದೇ ಬುಧವಾರ ಇಲ್ಲಿನ ಚಾಮುಂಡಿಬೆಟ್ಟದ ತಪ್ಪಲಿನ ಸ್ಮಶಾನದಲ್ಲಿ ನಡೆಯಲಿದೆ.

ಇದಕ್ಕೂ ಮುನ್ನ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಪಾರ್ಥಿವ ಶರೀರವನ್ನು ಕಲಾಮಂದಿರದ ಕಿಂದರಿಜೋಗಿ ಆವರಣದಲ್ಲಿ ಬೆಳಿಗ್ಗೆ 9ರಿಂದ 11ರವರೆಗೆ ಇರಿಸಲು ತೀರ್ಮಾನಿಸಲಾಗಿದೆ.

‘ಇವರ ಇಬ್ಬರು ಪುತ್ರರು ಸ್ವೀಡನ್‌ನಿಂದ ಮಂಗಳವಾರ ಬಂದಿದ್ದಾರೆ. ಬದುಕಿದ್ದಾಗ ತಂದೆ, ತಾಯಿಯವರು ಧಾರ್ಮಿಕ ವಿಧಿ ವಿಧಾನಗಳನ್ನು ನಂಬುತ್ತಿರಲಿಲ್ಲ. ಹಾಗಾಗಿ, ಅವರ ಅಂತ್ಯಕ್ರಿಯೆಯಲ್ಲೂ ಅವುಗಳನ್ನು ಅನುಸರಿಸದೇ ಇರಲು ಪುತ್ರರು ನಿರ್ಧರಿಸಿದ್ದಾರೆ’ ಎಂದು ರಂಗಕರ್ಮಿ ಎಚ್.ಜನಾರ್ದನ್ ‘‍ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.