ADVERTISEMENT

1ರಂದು ಇಳಯರಾಜ ಸಂಗೀತೋತ್ಸವ

​ಪ್ರಜಾವಾಣಿ ವಾರ್ತೆ
Published 28 ಮೇ 2019, 14:39 IST
Last Updated 28 ಮೇ 2019, 14:39 IST

ಮೈಸೂರು: ನಿನಾದ್ ಮ್ಯೂಸಿಕಲ್ ಟ್ರಸ್ಟ್‌ ವತಿಯಿಂದ ಜೂನ್ 1ರಂದು ಸಂಜೆ 5.30ಕ್ಕೆ ಇಲ್ಲಿನ ಕಲಾಮಂದಿರದಲ್ಲಿ ‘ಇಳಯರಾಜ ಸಂಗೀತೋತ್ಸವ’ವನ್ನು ಏರ್ಪಡಿಸಲಾಗಿದೆ.

ಕಾರ್ಯಕ್ರಮದಿಂದ ಸಂಗ್ರಹಗೊಂಡ ಹಣವನ್ನು ಬಡ ಆಟೊ ಚಾಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲು ನಿರ್ಧರಿಸಲಾಗಿದೆ ಎಂದು ಟ್ರಸ್ಟ್‌ ಅಧ್ಯಕ್ಷ ಎ.ಎಸ್.ಪ್ರಸನ್ನಕುಮಾರ್ ತಿಳಿಸಿದ್ದಾರೆ.

ಖ್ಯಾತ ಗಾಯಕ ರಾಜೇಶ್‌ ಕೃಷ್ಣನ್, ಸಾಧು ಕೋಕಿಲಾ ಅವರ ಸೋದರಿ ಉಷಾ ಕೋಕಿಲಾ, ಗಾಯಕ ಎ.ಎಸ್.ಪ್ರಸನ್ನಕುಮಾರ್, ಕೊಳಲು ವಾದಕ ನೀತು ನಿನಾದ್ ಸೇರಿದಂತೆ ಅನೇಕ ಗಾಯಕರ ಕಂಠಸಿರಿಯನ್ನು ಕಾರ್ಯಕ್ರಮದಲ್ಲಿ ಕೇಳಬಹುದಾಗಿದೆ.

ADVERTISEMENT

ಕಾರ್ಯಕ್ರಮದ ಟಿಕೆಟ್‌ಗಳನ್ನು ಕುವೆಂಪುನಗರ ಮೈಲಾರಿ ಹೋಟೆಲ್ ಪಕ್ಕದಲ್ಲಿರುವ ನಿನಾದ್ ಮ್ಯೂಸಿಕಲ್ ಟ್ರಸ್ಟ್‌ನಲ್ಲಿ ಆಸಕ್ತರು ಪಡೆಯಬಹುದಾಗಿದೆ. ಮಾಹಿತಿಗೆ ಮೊ: 9845860528 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.