ADVERTISEMENT

ಮೈಸೂರು ಆಕಾಶವಾಣಿಗೆ 90ರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 14:15 IST
Last Updated 10 ಸೆಪ್ಟೆಂಬರ್ 2024, 14:15 IST
ಯಾದವಗಿರಿಯ ಮೈಸೂರು ಆಕಾಶವಾಣಿಯ 90ನೇ ವರ್ಷದ ಕಾರ್ಯಕ್ರಮಗಳಿಗೆ ಪವಿತ್ರಾ ಹಾಗೂ ರಾಜಾರಾಂ ಅವರು ಗಿಡ ನೆಡುವ ಮೂಲಕ ಮಂಗಳವಾರ ಚಾಲನೆ ನೀಡಿದರು
ಯಾದವಗಿರಿಯ ಮೈಸೂರು ಆಕಾಶವಾಣಿಯ 90ನೇ ವರ್ಷದ ಕಾರ್ಯಕ್ರಮಗಳಿಗೆ ಪವಿತ್ರಾ ಹಾಗೂ ರಾಜಾರಾಂ ಅವರು ಗಿಡ ನೆಡುವ ಮೂಲಕ ಮಂಗಳವಾರ ಚಾಲನೆ ನೀಡಿದರು   

ಮೈಸೂರು: ಇಲ್ಲಿನ ಮೈಸೂರು ಆಕಾಶವಾಣಿ 90 ವಸಂತಗಳನ್ನು ಕಂಡ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳಿಗೆ ಮಂಗಳವಾರ ಚಾಲನೆ ನೀಡಲಾಯಿತು.

ಆಕಾಶವಾಣಿಯ ಸಂಸ್ಥಾಪಕ ಎಂ.ವಿ.ಗೋಪಾಲಸ್ವಾಮಿ ಅವರ ಮರಿ ಮೊಮ್ಮಗಳು ಪವಿತ್ರಾ ಹಾಗೂ ನಾ.ಕಸ್ತೂರಿ ಅವರ ಮೊಮ್ಮಗ ರಾಜಾರಾಂ ಅವರು ಇಲ್ಲಿನ ಯಾದವಗಿರಿಯ ಆಕಾಶವಾಣಿ ಕೇಂದ್ರದ ಆವರಣದಲ್ಲಿ ಗಿಡ ನೆಡುವ ಮೂಲಕ ಉದ್ಘಾಟಿಸಿದರು.

ಬಾನುಲಿ ಉಪ ನಿರ್ದೇಶಕ (ಕಾರ್ಯಕ್ರಮ) ಉಮೇಶ್‌ ಎಸ್‌.ಎಸ್‌. ಮಾತನಾಡಿ, ‘1935ರಲ್ಲಿ ಗೋಪಾಲಸ್ವಾಮಿ ಅವರ ನೇತೃತ್ವದಲ್ಲಿ ಆರಂಭವಾದ ಆಕಾಶವಾಣಿಯನ್ನು ಮೈಸೂರು ಸಂಸ್ಥಾನ ಮುಂದುವರಿಸಿತ್ತು. ನಂತರ ಕೇಂದ್ರ ಸರ್ಕಾರ ಅದರ ಜವಾಬ್ದಾರಿ ತೆಗೆದುಕೊಂಡಿತು. ಕುವೆಂಪು ಅವರ ಕಾವನ ವಾಚನದ ಮೂಲಕ ಆರಂಭವಾದ ಕಾರ್ಯಕ್ರಮದ ಸರಣಿ ಅನೇಕ ಸಾಹಿತಿಗಳಿಗೆ ವೇದಿಕೆ ನೀಡಿದೆ’ ಎಂದು ತಿಳಿಸಿದರು.

ADVERTISEMENT

ಸಹಾಯಕ ನಿರ್ದೇಶಕರಾದ ಅಬ್ದುಲ್‌ ರಶೀದ್‌, ಟಿ.ಬಿ.ವಿದ್ಯಾಶಂಕರ್‌ ಇದ್ದರು.

90ನೇ ವರ್ಷಾಚರಣೆ ಅಂಗವಾಗಿ ದಿನವಿಡೀ ವಿಶೇಷ ಕಾರ್ಯಕ್ರಮ ಬಿತ್ತರಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.