ADVERTISEMENT

ಮೈಸೂರು ಅರಮನೆ: ಆಯುಧ ಪೂಜೆ ನೆರವೇರಿಸಿದ ರಾಜವಂಶಸ್ಥ ಯದುವೀರ್

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2021, 8:09 IST
Last Updated 14 ಅಕ್ಟೋಬರ್ 2021, 8:09 IST
ರಾಜವಂಶಸ್ಥ ಯದುವೀರ್ ಅರಮನೆ ಆವರಣದಲ್ಲಿ ಆಯುಧ ಪೂಜೆ ನೆರವೇರಿಸಿದರು.
ರಾಜವಂಶಸ್ಥ ಯದುವೀರ್ ಅರಮನೆ ಆವರಣದಲ್ಲಿ ಆಯುಧ ಪೂಜೆ ನೆರವೇರಿಸಿದರು.   

ಮೈಸೂರು: ಮೈಸೂರು ರಾಜವಂಶಸ್ಥ ಯದುವೀರ್ ಗುರುವಾರ ಅರಮನೆ ಆವರಣದಲ್ಲಿ ಆಯುಧ ಪೂಜೆ ನೆರವೇರಿಸಿದರು.

ಕತ್ತಿ, ಗುರಾಣಿ ಸೇರಿದಂತೆ ರಾಜ ಮನೆತನದ ಆಯುಧಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು.

ಪೂಜೆಯಲ್ಲಿ ಕೆಲವೇ ಮಂದಿ ಭಾಗಿಯಾಗಿದ್ದರು.

ADVERTISEMENT

ಕಲ್ಯಾಣ ಮಂಟಪದಲ್ಲಿ ಪೂಜೆ ಸಲ್ಲಿಸಿದ ಬಳಿಕ, ಸವಾರಿ ತೊಟ್ಟಿಗೆ ಬಂದ ಯದುವೀರ್, ಖಾಸಗಿ ವಾಹನಗಳು, ಪಟ್ಟದ ಆನೆ, ಒಂಟೆ‌, ಕುದುರೆ, ಹಸು ಹಾಗೂ ಪಲ್ಲಕ್ಕಿಗೆ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.