ಮೈಸೂರು: ಅಗ್ರಹಾರದ ಮಾಧವ ಚಾರ್ ರಸ್ತೆಯಲ್ಲಿ ಸೋಮವಾರ ತಡ ರಾತ್ರಿ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಮೊಬೈಲ್ ಅಂಗಡಿ ಭಸ್ಮವಾಗಿದೆ.
‘ಎ.ಎಂ.ಸೆಲ್ ಜ಼ೋನ್ ಮಳಿಗೆಯಲ್ಲಿ ರಾತ್ರಿ 10.30ಕ್ಕೆ ಶಾರ್ಟ್ ಸರ್ಕಿಟ್ನಿಂದ ಬೆಂಕಿ ಹೊತ್ತಿಕೊಂಡಿರುವುದಾಗಿ ಮಾಲೀಕ ಸಯ್ಯದ್ ಕರೆ ಮಾಡಿದರು. ತಕ್ಷಣ ಧಾವಿಸಿದೆವು. ಒಂದು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿ ದ್ದೇವೆ’ ಎಂದು ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ ಎಚ್.ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
‘₹ 30 ಲಕ್ಷ ಬಂಡವಾಳದಲ್ಲಿ ಮೊಬೈಲ್ ಅಂಗಡಿ ಆರಂಭಿಸಿದ್ದೆ. ವಿಮೆಯೂ ಇಲ್ಲದ್ದರಿಂದ ದಿಕ್ಕು ತೋಚ ದಾಗಿದೆ’ ಎಂದು ಮಾಲೀಕ ಸಯ್ಯದ್ ತೌಕೀರ್ ಅಳಲು ತೋಡಿಕೊಂಡರು.
‘ಮಾಲೀಕರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಕೃಷ್ಣರಾಜ ಠಾಣೆ ಎಸ್ಐ ಎಂ.ಮಹದೇವಸ್ವಾಮಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.