ADVERTISEMENT

ನಂಜನಗೂಡು | ಬೈಕ್‌ಗೆ ಕ್ರೇನ್ ಡಿಕ್ಕಿ: ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:27 IST
Last Updated 10 ಫೆಬ್ರುವರಿ 2026, 5:27 IST
 ಸವಿತಾ ಭಾವ ಚಿತ್ರ
 ಸವಿತಾ ಭಾವ ಚಿತ್ರ   

ನಂಜನಗೂಡು: ನಗರದ ಮಲ್ಲನಮೂಲೆ ಮಠದ ಸಮೀಪ ಭಾನುವಾರ ಬೈಕ್‌ಗೆ ಕ್ರೇನ್ ಡಿಕ್ಕಿ ಹೊಡೆದ ಪರಿಣಾಮ ಗುಂಡ್ಲುಪೇಟೆ ತಾಲ್ಲೂಕಿನ ಚಿಕ್ಕಾಟಿಯ ಸವಿತಾ (52) ಮೃತಪಟ್ಟರು.

ಅಪಘಾತದಲ್ಲಿ ಸವಿತಾ ಅವರ ಪತಿ ನಿವೃತ್ತ ಶಿಕ್ಷಕ ರಾಮಚಂದ್ರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಮಚಂದ್ರ ತಮ್ಮ ಪತ್ನಿ ಸವಿತಾ ಅವರೊಂದಿಗೆ ಬೈಕ್‌ನಲ್ಲಿ ಕಾರ್ಯನಿಮಿತ್ತ ಮೈಸೂರಿಗೆ ತೆರಳಿದ್ದರು. ಸ್ವಗ್ರಾಮ ಚಿಕ್ಕಾಟಿಗೆ ಹಿಂತಿರುಗಿ ಬರುವ ವೇಳೆಘಟನೆ ನಡೆದಿದೆ ಎನ್ನಲಾಗಿದೆ.

ADVERTISEMENT

ಕ್ರೇನ್ ಚಾಲಕ ಅಪಘಾತ ನಡೆಸಿ ವಾಹನದ ಸಮೇತ ಸ್ಥಳದಿಂದ ನಾಪತ್ತೆಯಾಗಿದ್ದಾನೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಕೃಷ್ಣಕಾಂತ ಕೋಳಿ ಭೇಟಿ ನೀಡಿ ಮಹಜರು ನಡೆಸಿದರು. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.