ADVERTISEMENT

ಪಿರಿಯಾಪಟ್ಟಣ | ಆರೋಗ್ಯದಿಂದ ದೀರ್ಘಾಯುಷ್ಯ: ನ್ಯಾಯಾಧೀಶ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 2:36 IST
Last Updated 5 ಸೆಪ್ಟೆಂಬರ್ 2025, 2:36 IST
ಪಿರಿಯಾಪಟ್ಟಣದ ತಾ.ಪಂ. ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಪೋಷಣ್ ಅಭಿಯಾನ್ ಸಪ್ತಾಹವನ್ನು ನ್ಯಾಯಾಧೀಶ ಎಂ. ರಾಜು ಉದ್ಘಾಟಿಸಿದರು, ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ. ಆರ್. ಯೋಗೀಶ್ , ಟಿಎಚ್ಒ ಡಾ. ಶ್ರೀನಿವಾಸ್, ಸಿಡಿಪಿಒ ಗೀತಾ, ವಕೀಲರ ಸಂಘದ ಅಧ್ಯಕ್ಷ ಧನಪಾಲ್, ತಾಲ್ಲೂಕು ಆರೋಗ್ಯಾಧಿಕಾರಿ ಪಿ. ಪಿ. ಲತಾ ಇದ್ದಾರೆ
ಪಿರಿಯಾಪಟ್ಟಣದ ತಾ.ಪಂ. ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಪೋಷಣ್ ಅಭಿಯಾನ್ ಸಪ್ತಾಹವನ್ನು ನ್ಯಾಯಾಧೀಶ ಎಂ. ರಾಜು ಉದ್ಘಾಟಿಸಿದರು, ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ. ಆರ್. ಯೋಗೀಶ್ , ಟಿಎಚ್ಒ ಡಾ. ಶ್ರೀನಿವಾಸ್, ಸಿಡಿಪಿಒ ಗೀತಾ, ವಕೀಲರ ಸಂಘದ ಅಧ್ಯಕ್ಷ ಧನಪಾಲ್, ತಾಲ್ಲೂಕು ಆರೋಗ್ಯಾಧಿಕಾರಿ ಪಿ. ಪಿ. ಲತಾ ಇದ್ದಾರೆ   

ಪಿರಿಯಾಪಟ್ಟಣ: ‘ಆರೋಗ್ಯವಂತರಾಗಿದ್ದರೆ ಮಾತ್ರ ದೀರ್ಘಾಯುಷಿಗಳಾಗಿ ಬದುಕಲು ಸಾಧ್ಯ’ ಎಂದು ಪಟ್ಟಣದ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಎಂ. ರಾಜು ಎಂದು ತಿಳಿಸಿದರು.

ಪಟ್ಟಣಲ್ಲಿ ಗುರುವಾರ ನಡೆದ ರಾಷ್ಟ್ರೀಯ ಪೋಷಣ್ ಅಭಿಯಾನ್ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾರಾದರೂ ಅನಾರೋಗ್ಯಕ್ಕೀಡಾದರೆ ಅವರು ಮಾತ್ರ ತೊಂದರೆ ಅನುಭವಿಸುವುದಿಲ್ಲ, ಅವರ ಕುಟುಂಬದವರು, ಅವಲಂಬಿತರು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ತೊಂದರೆ ಅನುಭವಿಸುತ್ತಾರೆ ಎಂದು ಹೇಳಿದರು.

ಅಪೌಷ್ಟಿಕತೆಯಿಂದ ಮಕ್ಕಳು, ಮಹಿಳೆಯರು, ವಯೋವೃದ್ಧರು, ಗರ್ಭಿಣಿಯರು ಬಳಲ ಬಾರದು ಎಂದು ಕೇಂದ್ರ ಸರ್ಕಾರ  ರಾಷ್ಟ್ರೀಯ ಪೋಷಣ್ ಅಭಿಯಾನ್ ಜಾರಿಗೆ ತಂದಿದ್ದು, ಇದರೊಂದಿಗೆ ವ್ಯಾಪಕ ಪ್ರಚಾರ ಮಾಡುವ ಮೂಲಕ ಅಪೌಷ್ಟಿಕತೆ ಹೋಗಲಾಡಿಸಲು ಯತ್ನಿಸುತ್ತಿದೆ ಎಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ. ಆರ್. ಯೋಗೀಶ್ , ಟಿಎಚ್ಒ ಡಾ. ಶ್ರೀನಿವಾಸ್, ಸಿಡಿಪಿಒ ಗೀತಾ, ವಕೀಲರ ಸಂಘದ ಅಧ್ಯಕ್ಷ ಧನಪಾಲ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ. ಪಿ. ಲತಾ ಮಾತನಾಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.