ADVERTISEMENT

ವಿಧಾನ ಪರಿಷತ್‌: ಬಸವರಾಜುಗೆ ಅವಕಾಶ ನೀಡಿ- ರಾಜ್ಯ ನಾಯಕರ ಯುವ ಸೇನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2023, 14:45 IST
Last Updated 14 ಜೂನ್ 2023, 14:45 IST

ಮೈಸೂರು: ‘ನಾಯಕ ಸಮುದಾಯದ ಮುಖಂಡ ಎಸ್.ಸಿ. ಬಸವರಾಜು ಅವರನ್ನು ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್ತಿನ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕು’ ಎಂದು ರಾಜ್ಯ ನಾಯಕರ ಯುವ ಸೇನೆ ಒತ್ತಾಯಿಸಿದೆ.

ನಗರದಲ್ಲಿ ಬುಧವಾರ ಸೇನೆಯ ರಾಜ್ಯಾಧ್ಯಕ್ಷ ದೇವರಾಜ್ ಟಿ. ಕಾಟೂರು ಮಾತನಾಡಿ, ‘ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ಚಾಮರಾಜನಗರ ಜಿಲ್ಲೆಯ ಉಸ್ತುವಾರಿಯಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಬಸವರಾಜು ಶ್ರಮಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ನಾಯಕ ಸಮಾಜಕ್ಕೆ ಗಟ್ಟಿಧ್ವನಿ ಬರಲು ಬಸವರಾಜು ಅವರನ್ನು ಆಯ್ಕೆ ಮಾಡಬೇಕು’ ಎಂದು ಆಗ್ರಹಿಸಿದರು.

ಸೇನೆಯ ರಾಜ್ಯ ಉಪಾಧ್ಯಕ್ಷ ಶಿವಕುಮಾರ್, ಜಿಲ್ಲಾಧ್ಯಕ್ಷ ಉದ್ಬೂರು ಸೋಮಣ್ಣ, ಉಪಾಧ್ಯಕ್ಷ ಕಣಿಯನಹುಂಡಿ ಸಿದ್ದರಾಜು, ಸಂಘಟನಾ ಕಾರ್ಯದರ್ಶಿ ಸೋಮೇಶ್ವರಪುರ ನಾರಾಯಣ, ಗೌರವ ಸಲಹೆಗಾರ ಪರಶಿವಮೂರ್ತಿ ಇದ್ದರು.

ADVERTISEMENT

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.