ADVERTISEMENT

‘ಆತ್ಮದಲ್ಲೇ ಸಕಲ ಶಕ್ತಿ’

ಆಷಾಢ ಮಾಸದ ನಂದೀಶ್ವರ ಅಷ್ಟಾಹ್ನಿಕ ಪರ್ವ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 16:16 IST
Last Updated 9 ಜುಲೈ 2019, 16:16 IST
ಆಷಾಢ ಮಾಸದ ನಂದೀಶ್ವರ ಅಷ್ಟಾಹ್ನಿಕ ಪರ್ವಕ್ಕೆ ಮಂಗಳವಾರ ರಾತ್ರಿ ಮೈಸೂರಿನ ಶಾಂತೀಶ್ವರಸ್ವಾಮಿ ಬಸದಿ (ಕೋಟೆ ಬಸದಿ)ಯಲ್ಲಿ ಚಾಲನೆ ನೀಡಲಾಯಿತು. ನಿವೃತ್ತ ಮುಖ್ಯ ಎಂಜಿನಿಯರ್‌ ಎ.ಆನಂದಕುಮಾರ್‌ ಪ್ರವಚನ ನೀಡಿದರು. ಎಸ್‌.ಬಿ.ಸುರೇಶ್‌ ಜೈನ್‌, ಎಂ.ಆರ್.ಸುನೀಲ್‌ಕುಮಾರ್, ಶೀಲಾ ಅನಂತರಾಜ್, ಪದ್ಮಾ ಧನ್ಯಕುಮಾರ್ ಇದ್ದಾರೆ
ಆಷಾಢ ಮಾಸದ ನಂದೀಶ್ವರ ಅಷ್ಟಾಹ್ನಿಕ ಪರ್ವಕ್ಕೆ ಮಂಗಳವಾರ ರಾತ್ರಿ ಮೈಸೂರಿನ ಶಾಂತೀಶ್ವರಸ್ವಾಮಿ ಬಸದಿ (ಕೋಟೆ ಬಸದಿ)ಯಲ್ಲಿ ಚಾಲನೆ ನೀಡಲಾಯಿತು. ನಿವೃತ್ತ ಮುಖ್ಯ ಎಂಜಿನಿಯರ್‌ ಎ.ಆನಂದಕುಮಾರ್‌ ಪ್ರವಚನ ನೀಡಿದರು. ಎಸ್‌.ಬಿ.ಸುರೇಶ್‌ ಜೈನ್‌, ಎಂ.ಆರ್.ಸುನೀಲ್‌ಕುಮಾರ್, ಶೀಲಾ ಅನಂತರಾಜ್, ಪದ್ಮಾ ಧನ್ಯಕುಮಾರ್ ಇದ್ದಾರೆ   

ಮೈಸೂರು: ಆಷಾಢ ಮಾಸದ ನಂದೀಶ್ವರ ಅಷ್ಟಾಹ್ನಿಕ ಪರ್ವಕ್ಕೆ ಮಂಗಳವಾರ ರಾತ್ರಿ ನಗರದ ಶಾಂತೀಶ್ವರಸ್ವಾಮಿ ಬಸದಿ (ಕೋಟೆ ಬಸದಿ)ಯಲ್ಲಿ ಚಾಲನೆ ನೀಡಲಾಯಿತು.

ಪದ್ಮಶ್ರೀ ಜೈನ ಮಹಿಳಾ ಸಮಾಜದ ಶೀಲಾ ಅನಂತರಾಜ್ ದೀಪ ಬೆಳಗಿಸುವ ಮೂಲಕ ಪರ್ವಕ್ಕೆ ಚಾಲನೆ ನೀಡಿದರು.

ನಿವೃತ್ತ ಮುಖ್ಯ ಎಂಜಿನಿಯರ್, ಪ್ರವಚನಕಾರ ಎ.ಆನಂದಕುಮಾರ್ ಮಾತನಾಡಿ ‘ಆತ್ಮದಲ್ಲಿ ಸಕಲ ಶಕ್ತಿ ಅಡಗಿದೆ. ಮೋಕ್ಷಕ್ಕೂ ಸನ್ಮಾರ್ಗ ತೋರಲಿದೆ. ಮೋಕ್ಷ ಪ್ರಾಪ್ತಿಯ ಶಕ್ತಿ ನಮ್ಮಲ್ಲೇ ಅಡಗಿದ್ದು, ಚೈತನ್ಯ ಶಕ್ತಿಯ ಮೂಲಕ ಅದನ್ನು ಕಂಡುಕೊಳ್ಳಬೇಕಿದೆ’ ಎಂದರು.

ADVERTISEMENT

‘ಸುಖ–ದುಃಖ ಜೀವದ್ರವ್ಯಕ್ಕೆ ಸಂಬಂಧಿಸಿದ್ದು. ದ್ರವ್ಯ ಮತ್ತು ಗುಣ ಶಕ್ತಿಯ ರೂಪದಲ್ಲಿದೆ. ಇಂದು ನಾವು ಕೇಳೋದು ಬೇರೆ. ಸ್ವೀಕರಿಸೋದು ಬೇರೆ ಎಂಬಂತಹ ಬದುಕು ಸಾಗಿಸುತ್ತಿದ್ದೇವೆ. ಇದಲ್ಲ ಜೀವನ’ ಎಂದು ಹೇಳಿದರು.

‘ಜೀವ ಇರೋದೇ ಚೈತನ್ಯ ಶಕ್ತಿ. ಚೈತನ್ಯ ಇಲ್ಲದಿರುವುದೇ ಅಜೀವ ಶಕ್ತಿ. ಚೈತನ್ಯ ಶಕ್ತಿಗೆ ನೋಡುವ–ತಿಳಿಯುವ ಶಕ್ತಿಯಿದೆ. ಜೀವ ಇರೋ ತನಕ ಲವಲವಿಕೆಯಿಂದ ಬದುಕಬೇಕು. ಪಂಚೇಂದ್ರೀಯ ಆತ್ಮಕ್ಕೆ ಸಂಬಂಧಿಸಿದವು’ ಎಂದರು.

ದಿಗಂಬರ ಜೈನ ಸಮಾಜದ ಅಧ್ಯಕ್ಷ ಎಂ.ಆರ್.ಸುನೀಲ್‌ಕುಮಾರ್, ಶಾಂತಿನಾಥ ಸೇವಾ ಸಮಿತಿ ಟ್ರಸ್ಟ್‌ನ ಎಸ್‌.ಬಿ.ಸುರೇಶ್‌ ಜೈನ್‌, ಸೇವಾರ್ಥದಾರರಾದ ವಿದ್ಯಾರಣ್ಯಪುರಂನ ಪದ್ಮಾ ಧನ್ಯಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.