ADVERTISEMENT

ಪ್ರಧಾನಿ ಅಂಗರಕ್ಷಕರಾಗಿದ್ದ ನಿವೃತ್ತ ಮೇಜರ್ ನಿಧನ

​ಪ್ರಜಾವಾಣಿ ವಾರ್ತೆ
Published 30 ಜುಲೈ 2018, 18:31 IST
Last Updated 30 ಜುಲೈ 2018, 18:31 IST
ಸುಧೀರ್
ಸುಧೀರ್   

ನಂಜನಗೂಡು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಂಗರಕ್ಷಕರಾಗಿದ್ದ ನಿವೃತ್ತ ಮೇಜರ್ ಸುಧೀರ್ ಸೋಮವಾರ ಅನಾರೋಗ್ಯದಿಂದ ತಮಿಳುನಾಡಿನ ಸೇಲಂನ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ ಪತ್ನಿ, ಒಬ್ಬ ಪುತ್ರ ಇದ್ದಾರೆ. ಅಂತ್ಯಕ್ರಿಯೆ ಊಟಿಯಲ್ಲಿ ನೆರವೇರಿತು.

ನಂಜನಗೂಡು ರೈಲ್ವೆ ನಿಲ್ದಾಣದಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ವಿಶ್ವನಾಥನ್ ನಾಯರ್ ಅವರ ಪುತ್ರ. ಇಲ್ಲಿನ ಕಾರ್ಮೆಲ್ ಶಾಲೆ ಹಾಗೂ ಜೂನಿಯರ್ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದರು. ನಂತರ, 1999ರಲ್ಲಿ ಸೇನೆಗೆ ಸೇರಿದ್ದರು. 2015ರಲ್ಲಿ ಪ್ರಧಾನಿಮೋದಿ ಅವರ ಅಂಗರಕ್ಷಕರಾಗಿ ಸೇವೆ ಸಲ್ಲಿಸಿದ್ದರು.

ಸೇವೆಯಿಂದ ನಿವೃತ್ತಿ ಹೊಂದಿದ ಬಳಿಕ ಊಟಿಯಲ್ಲಿ ನೆಲೆಸಿದ್ದರು. ಯಕೃತ್ತಿನ ತೊಂದರೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.