ಮೈಸೂರು: ‘ಸಿದ್ದರಾಮಯ್ಯ ಯಾವಾಗ ಜ್ಯೋತಿಷಿ ಆದರೋ, ಭವಿಷ್ಯ ನುಡಿಯಲು ಶುರು ಮಾಡಿದರೋ ಎಂಬುದು ನನಗೆ ಗೊತ್ತಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
‘ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂದು ಹಲವು ದಿನಗಳಿಂದ ಹೇಳುತ್ತಾ ಬಂದಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆ ಆದ ಬಳಿಕ ಬದಲಾವಣೆ ಆಗುತ್ತದೆ ಎಂದಿದ್ದರು. ಇದೀಗ ಏಪ್ರಿಲ್ನಲ್ಲಿ ಬದಲಾವಣೆ ಅನ್ನುತ್ತಿದ್ದಾರೆ. ಆ ಬಳಿಕ ಮೇ, ಜೂನ್, ಜುಲೈ... ಹೀಗೆ ಕ್ಯಾಲೆಂಡರ್ನಲ್ಲಿರುವ ಎಲ್ಲ ತಿಂಗಳುಗಳನ್ನೂ ಹೇಳುತ್ತಾರೆ. ಅವರ ಭವಿಷ್ಯ ಎಂದೂ ನಿಜವಾಗುವುದಿಲ್ಲ’ ಎಂದು ಭಾನುವಾರ ಇಲ್ಲಿ ಕುಟುಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.