ADVERTISEMENT

ಇಂದ್ರಜಿತ್‌ ವಿರುದ್ಧ ಸುಮೊಟೊ ದಾಖಲಿಸಿ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 9:44 IST
Last Updated 22 ಜುಲೈ 2021, 9:44 IST
ಎಂ.ಲಕ್ಷ್ಮಣ್‌
ಎಂ.ಲಕ್ಷ್ಮಣ್‌   

ಮೈಸೂರು: ‘ಮೈಸೂರು ಪೊಲೀಸರ ಬಗ್ಗೆ ಬೆಂಗಳೂರಿನಲ್ಲಿ ಕುಳಿತು ಕೇವಲವಾಗಿ ಮಾತನಾಡಿರುವ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ವಿರುದ್ಧ ಸುಮೊಟೊ ದಾಖಲಿಸಿ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಗುರುವಾರ ಇಲ್ಲಿ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹುಚ್ಚುಚ್ಚಾಗಿ ಮಾತನಾಡಬೇಡಿ. ನಿಮ್ಮ ಹೇಳಿಕೆಯನ್ನು ಮೊದಲು ವಾಪಸ್‌ ‍ಪಡೆಯಿರಿ’‍ ಎಂದು ಇಂದ್ರಜಿತ್‌ಗೆ ಒತ್ತಾಯಿಸಿದರು.

‘ಚಲನಚಿತ್ರ ನಟ ದರ್ಶನ್‌ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೋ ಮೂಲೆಯಲ್ಲಿ ಕುಳಿತು ಮೈಸೂರಿನ ಪೊಲೀಸ್ ಠಾಣೆಗಳನ್ನು ಸೆಟ್ಲ್‌ಮೆಂಟ್‌ ಠಾಣೆಗಳು ಎಂದಿದ್ದೀರಿ. ನೀವು ಯಾವುದಾದರೂ ದೂರು ಕೊಟ್ಟಿದ್ದೀರಾ? ಇಲ್ಲ ನಿಮ್ಮ ಸೆಲೆಬ್ರಿಟಿಯಿಂದ ಹೊಡೆತ ತಿಂದಿದ್ದಾರೆ ಎನ್ನುವ ವ್ಯಕ್ತಿಯಾದರೂ ಪೊಲೀಸರಿಗೆ ದೂರು ಕೊಟ್ಟಿದ್ದಾರಾ?’ ಎಂದು ಕೆಪಿಸಿಸಿ ವಕ್ತಾರ ಇಂದ್ರಜಿತ್‌ ಹೇಳಿಕೆ ವಿರುದ್ಧ ಕಿಡಿಕಾರಿದರು.

ADVERTISEMENT

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಪೊಲೀಸ್‌ ಠಾಣೆಯ ಆವರಣದಲ್ಲೇ ನನ್ನ ವಿಷಯಕ್ಕೆ ಬಂದರೆ ತಲೆ ಕತ್ತರಿಸುತ್ತೇವೆ ಎಂದು ಸೆಲೆಬ್ರೆಟಿ ಅಬ್ಬರಿಸಿದ್ದಾರೆ? ಇವರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಲಕ್ಷ್ಮಣ್‌ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.