ADVERTISEMENT

ಗುಂಡ್ಲುಪೇಟೆ: ಮೂವರ ಕೊಲೆ, ಒಬ್ಬ ಗಂಭೀರ

​ಪ್ರಜಾವಾಣಿ ವಾರ್ತೆ
Published 26 ಮೇ 2020, 18:16 IST
Last Updated 26 ಮೇ 2020, 18:16 IST
   

ಗುಂಡ್ಲುಪೇಟೆ: ಪಟ್ಟಣದ ಜಾಕೀರ್ ಹುಸೇನ್‌ನಗರದಲ್ಲಿ ಮಂಗಳವಾರ ರಾತ್ರಿ ಮೂವರ ಹತ್ಯೆ ನಡೆದಿದೆ. ಹಳೇ ವೈಷಮ್ಯ ಮತ್ತು ಹಣಕಾಸಿನ ವಿಚಾರಕ್ಕೆ‌ಕೊಲೆ ನಡೆದಿದೆ ಎಂದು ಹೇಳಲಾಗಿದೆ.

ಪಟ್ಟಣದವರೇ ಆದ ಜಲಾವುಲ್ಲಾ (30), ಕೈಸರ್ (29) ಮತ್ತು ಇದ್ರಿಸ್ (30) ಕೊಲೆಯಾದವರು‌ ನಸರುಲ್ಲಾ ಎಂಬುವವರಿಗೆ ತೀವ್ರವಾದ ಗಾಯಗಳಾಗಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಳೆ ವೈಷಮ್ಯದಿಂದ ಆರಂಭವಾದ ಗಲಾಟೆ ವಿಕೋಪಕ್ಕೆ‌ ತಿರುಗಿ ಪರಸ್ಪರ ಚಾಕು, ಮಚ್ಚುಗಳಿಂದ ಹೊಡೆದಾಡಿಕೊಂಡಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಇದ್ದು ಎಸ್‌ಪಿ ಎಚ್‌.ಡಿ.ಆನಂದಕುಮಾರ್, ಡಿವೈಎಸ್ ಪಿ ಮೋಹನ್, ಸ್ಥಳೀಯ ಪೊಲೀಸರು ಭೇಟಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.