ADVERTISEMENT

ಟೋಲ್ ಸಿಬ್ಬಂದಿ ಕೊಲೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 10:21 IST
Last Updated 12 ಅಕ್ಟೋಬರ್ 2020, 10:21 IST

ಮೈಸೂರು: ಮೈಸೂರು-ನಂಜನಗೂಡು ರಸ್ತೆಯ ಟೋಲ್‌ನಲ್ಲಿ, ಕ್ಷುಲ್ಲಕ ಕಾರಣಕ್ಕೆ ಟೋಲ್‌ನ ಸಿಬ್ಬಂದಿಯೊಬ್ಬರನ್ನು ಕೊಲೆ ಮಾಡಲಾಗಿದೆ.

ಮೈಸೂರು ತಾಲ್ಲೂಕಿನ ಕಡಕೊಳ ನಿವಾಸಿ ಗಣೇಶ್‌ (22) ಕೊಲೆಯಾದ ವ್ಯಕ್ತಿ.

ಟೋಲ್‌ ಶುಲ್ಕದ ವಿಷಯಕ್ಕೆ ಆರಂಭವಾದ ತಕರಾರು, ಜಗಳಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯಗೊಂಡಿದೆ. ನಂಜನಗೂಡಿನ ನಾಲ್ಕೈದು ಯುವಕರು ಈ ಕೊಲೆ ಎಸಗಿದ್ದಾರೆ ಎಂದು ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

‘ಶನಿವಾರ ರಾತ್ರಿ ಕಾರಿನಲ್ಲಿ ಯುವಕರು ಟೋಲ್‌ ಮೂಲಕ ಚಲಿಸುತ್ತಿದ್ದ ಸಂದರ್ಭ, ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆದಿತ್ತು. ಇದೇ ಯುವಕರು ಭಾನುವಾರ ರಾತ್ರಿಯೂ ಸಹ ಟೋಲ್ ಶುಲ್ಕ ಪಾವತಿಸುವ ಸಂಬಂಧ ತಕರಾರು ತೆಗೆದಿದ್ದಾರೆ. ಆ ಸಂದರ್ಭ ಟೋಲ್‌ನ ಯುವಕರು ಜಗಳಕ್ಕಿಳಿದಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದ್ದು, ಕಾರಿನಲ್ಲಿದ್ದ ಯುವಕರು ಗಣೇಶನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಗಂಭೀರವಾಗಿ ಗಾಯಗೊಂಡ ಗಣೇಶ್‌ನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಸ್ಪಂದಿಸದೆ ಸೋಮವಾರ ನಸುಕಿನಲ್ಲಿ ಮೃತಪಟ್ಟಿದ್ದಾರೆ. ಹಲ್ಲೆ ನಡೆಸಿ, ಕೊಲೆಗೈದ ಯುವಕರ ಶೋಧ ನಡೆದಿದೆ’ ಎಂದು ಮೈಸೂರು ದಕ್ಷಿಣ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.