ADVERTISEMENT

ಪುತ್ತೂರರಿಗೆ ನಿರ್ಮಾಣ್‌–ಪುರಂದರ ಸಂಗೀತ ರತ್ನ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2019, 10:46 IST
Last Updated 1 ಫೆಬ್ರುವರಿ 2019, 10:46 IST
ಪುತ್ತೂರು ನರಸಿಂಹ ನಾಯಕ್
ಪುತ್ತೂರು ನರಸಿಂಹ ನಾಯಕ್   

ಬೆಂಗಳೂರು: ವೀಯೆಲ್ಲೆನ್‌– ನಿರ್ಮಾಣ್ ಪುರಂದರ ಪ್ರತಿಷ್ಠಾನ ಕೊಡಮಾಡುವ ನಿರ್ಮಾಣ್‌–ಪುರಂದರ ಸಂಗೀತ ರತ್ನ ಪ್ರಶಸ್ತಿ–2019 ಗೆ ವಿದ್ವಾನ್‌ಪುತ್ತೂರು ನರಸಿಂಹ ನಾಯಕ್ ಆಯ್ಕೆಯಾಗಿದ್ದಾರೆ.

ಪ್ರತಿಷ್ಠಾನದಿಂದ ಕೊಡಮಾಡುತ್ತಿರುವ 10ನೇ ವರ್ಷದ ಪ್ರಶಸ್ತಿಇದಾಗಿದ್ದು, ₹1 ಲಕ್ಷದ ಒಂದು ನಗದು, ಪ್ರಶಸ್ತಿ ಫಲಕ, ಸ್ವರ್ಣಹಾರ ಹಾಗೂ ‍ಪದಕವನ್ನು ಒಳಗೊಂಡಿದೆ.

ಮಾರ್ಚ್‌ 3ರಂದು ಬನ್ನೇರುಘಟ್ಟದ ನಿಸರ್ಗ ಬಡಾವಣೆಯ ಪುರಂದರ ಮಂಟಪದಲ್ಲಿ ಸಂಜೆ 6ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.